ಹೊಸದುರ್ಗ:
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎನ್ನುವ ಕವಿ ವಾಣಿಯಂತೆ ಯುಗಾದಿ ಹಬ್ಬ ಬರುತ್ತಿದ್ದಂತೆ ತಾಲ್ಲೂಕಿನಾದ್ಯಾಂತ ಜನರಲ್ಲಿ ಸಂತಸ ಸಂಭ್ರಮ ಮನೆ ಮಾಡಿದೆ.
ನವ ಮನ್ವಂತರ ಸ್ವಾಗತಿಸಲು ಸಕಲ ಸಿದ್ದತೆಯಲ್ಲಿ ಜನರು ತೊಡಗಿದ್ದಾರೆ. ಹಿಂದುಗಳ ಪಾಲಿಗೆ ಎಲ್ಲ ಹಬ್ಬಗಳಲ್ಲಿ ಯುಗಾದಿ ಅತ್ಯಂತ ದೊಡ್ಡ ಹಬ್ಬ. ಎರಡು ಮೂರು ದಿನ ಮೊದಲೆ ಎಲ್ಲೆಡೆ ಹಬ್ಬದ ವಾತವರಣ ಸಂಭ್ರಮ ಕಳೆ ಕಟ್ಟುತ್ತಿತ್ತು. ಹೊಸ ಬಟ್ಟೆ ಖರೀದಿ ಹಣ್ಣು, ಬೇವಿನ ಮಡಿಕೆ, ಎಚ್ಚ ಸೇರಿದಂತೆ ವಿವಿಧ ಸಾಮಾಗ್ರಿ ಖರೀದಿಗಳಲ್ಲಿ ತೊಡಗಿಕೊಳ್ಳುವ ಜನರು ಹಬ್ಬದ ಸಿದ್ದತೆಯಲ್ಲಿ ತೊಡಗಿದ್ದರು.
ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಮಾರುಕಟ್ಟೆ ಜನಸಂದಣಿ ಕಂಡು ಬಂತು. ಅಂಗಡಿ ಮುಂಗಟ್ಟುಗಳು ಜನರಿಂದ ತುಂಬಿದ್ದವು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಜನರು ಹಬ್ಬದ ಖರೀದಿಗಾಗಿ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿರುವ ದೃಶ್ಯ ಕಂಡು ಬಂತು.
ವಾಹನ ಸಂಚಾರ ದಟ್ಟವಾಗಿತ್ತು, ಇದರಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯ ಕಂಡು ಬಂತು. ಬಟ್ಟೆ ಅಂಗಡಿಗಳಲ್ಲಿ ಜನರು ತುಂಬಿದ್ದರು. ಮಕ್ಕಳಿಗೆ ಪಾಲಕರು ಬಟ್ಟೆ ಕೊಡಿಸುವಲ್ಲಿ ನಿರತರಾಗಿದ್ದರು. ಬಿಸಿಲಿನ ಪ್ರಖರತೆಯಿಂದ ಧಣಿವಾರಿಸಿ ಕೊಳ್ಳಲು ಕೆಲವರು ಅಂಗಡಿಗಳ ನೆರಳು ಆಶ್ರಯಿಸಿದ್ದರು.
ಕಲ್ಲಂಗಡಿ, ದ್ರಾಕ್ಷಿ, ಸೇಬು, ಬಾಳೇಹಣ್ಣು, ಸೇರಿಂದತೆ ವಿವಿಧ ಹಣ್ಣುಗಳ ರಾಶಿ ಹಾಕಲಾಗಿತ್ತು. ಸೇವಂತಿ ಹೂ 80 ರಿಂದ 100 ರೂ ಮಲ್ಲಿಗೆ, ಕನಕಾಂಬರ ಹಾಗೂ ಚೆಂಡು ಹೂ 50 ರೂ ಮಾರಟವಾಗುತ್ತಿದೆ . ಸಂಜೆ ಹೊತ್ತಿಗೆ ಬಿಸಿಲು ತಣ್ಣಾಗಾಗುತ್ತಿದ್ದಂತೆ ಜನರು ವಿವಿಧ ಸಮಾಗ್ರಿಗಳನ್ನು ಖರೀದಿಗೆ ಮುಗಿಬಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
