ಚಿತ್ರದುರ್ಗ
ಇಂದಿನ ಆಧುನಿಕ ಸಮಾಜದಲ್ಲಿ ಜನಸಾಮಾನ್ಯರಲ್ಲಿನ ಸೌಂಧರ್ಯ ಪ್ರಜ್ಞೆಯ ಅರಿವು ಉದ್ಯಮ ಕ್ಷೇತ್ರದಲ್ಲಿ ಉದ್ಯೋಗವಕಾಶಗಳ ಸೃಷ್ಠಿಗೆ ಪೂರಕವಾಗಿದೆ ಎಂದು ಎಸ್ಜಿಎಮ್ ವಿದ್ಯಾಪೀಠದ ನಿರ್ದೇಶಕರಾದ ಶ್ರೀಮತಿ ಗಾಯತ್ರಿ ಶಿವರಾಂ, ಅಭಿಪ್ರಾಯಪಟ್ಟರು.
ರುಡ್ಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 30 ದಿನಗಳ ಉದ್ಯಮಶೀಲತಾಭಿವೃದ್ಧಿ – ಬ್ಯೂಟಿಪಾರ್ಲರ್ ಮ್ಯಾನೇಜ್ಮೆಂಟ್ ತರಬೇತಿ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪಾರ್ಲರ್ ಮ್ಯಾನೇಜ್ಮೆಂಟ್ನಲ್ಲಿ ಕೌಶಲ್ಯ ಅಭಿವೃದ್ದಿಯಲ್ಲಿ ವಿಶೇಷತೆಯನ್ನು ಹೊಂದುವುದು ಇಂದು ಅವಶ್ಯ ಮತ್ತು ಅನಿವಾರ್ಯವಾಗಿದೆ.
ಬ್ಯೂಟಿಶಿಯನ್ ಆದವರು ಪಾರ್ಲರ್ನ ಕೆಲಸದ ವಾತಾವರಣದಲ್ಲಿ ಸ್ವಚ್ಚತೆ, ಮಾಡುವ ಕೆಲಸದಲ್ಲಿ ಶಿಸ್ತು, ಬದ್ಧತೆ ಮತ್ತು ನಡವಳಿಕೆಯಲ್ಲಿ ಸೌಜನ್ಯತೆಯ ಪ್ರತಿರೂಪದಂತಿದ್ದಾಗ ತಮ್ಮ ವೃತ್ತಿ ಜೀವನದಲ್ಲಿ ಏಳಿಗೆಯನ್ನು ಹೊಂದಲು ಸಾಧ್ಯ ಎಂದು ಹೇಳಿದರು. ರುಡ್ಸೆಟ್ ಮತ್ತು ಬೇರೆಡೆ ವೃತ್ತಿ ಕೌಶಲ್ಯ ತರಬೇತಿಗಳನ್ನು ಕಲಿಯಲಿಕ್ಕೂ ಬಹಳ ವ್ಯತ್ಯಾಸ ವಿರುತ್ತದೆ. ಮನಸ್ಸನ್ನು ಸಕಾರಾತ್ಮಕತೆಯತ್ತ ಕೊಂಡೊಯುತ್ತ ವ್ಯಕ್ತಿತ್ವದಲ್ಲಿ ತಾಳ್ಮೆ, ಶ್ರದ್ದೆ ಮತ್ತು ಕ್ಷಮತೆಯನ್ನು ರೂಢಿಸಿಕೊಂಡು ವೃತ್ತಿ ಬದುಕುನ್ನು ರೂಪಿಸಿಕೊಳ್ಳಲು ಪೂರಕವಾದ ಕಲಿಕಾ ವಾತಾವರಣವನ್ನು ನಿರಂತರವಾಗಿ ಕಲ್ಪಿಸುತ್ತಿರುವ ಸಂಸ್ಥೆಯಾಗಿದೆ. ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡುತ್ತಾ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರುಡ್ಸೆಟ್ ಸಂಸ್ಥೆಯ ನಿರ್ದೇಶಕರು ಮತ್ತು ಚೀಪ್ ಮ್ಯಾನೇಜರ್, ಕೆನರಾ ಬ್ಯಾಂಕ್, ಚಿತ್ರದುರ್ಗ ಎ.ಮುನುರಾಜು ಶಿಬಿರಾರ್ಥಿಗಳನ್ನ ಉದ್ದೇಶಿಸಿ ಜನಸಾಮಾನ್ಯರಲ್ಲಿ ಇಂದು ಆರೋಗ್ಯ ಕಾಳಜಿಯೊಂದಿಗೆ ಸೌಂದರ್ಯ ಪ್ರಜ್ಞೆ – ನಾಗರೀಕತೆಯ ಹೆಗ್ಗುರುತಾಗಿದೆ. ಇಂತಹ ಕ್ಷೇತ್ರದಲ್ಲಿ ಕೌಶಲ್ಯಭರಿತರಾಗಿ ವೃತ್ತಿ ಬದುಕನ್ನು ಆರಂಭಿಸಿದಲ್ಲಿ ಕೈತುಂಬಾ ಕೆಲಸ ಮತ್ತು ಆದಾಯಪಡೆಯುವುದರಲ್ಲಿ ಅನುಮಾನವೇ ಇಲ್ಲ, ಆದ್ದರಿಂದ ಇಲ್ಲಿನ ಉತ್ತಮ ವಾತಾವರಣದ ಸ್ವಚ್ಚ ಕಲಿಕೆಯಲ್ಲಿ ತೊಡಗಿ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಿವರಾಂ, ಉಪಸ್ಥಿತರಿದ್ದರು. ರುಡ್ಸೆಟ್ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಲತಾಮಣಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿ ಸ್ವಾಗತಿಸಿದರು ಸಂಸ್ಥೆಯ ಉಪನ್ಯಾಸಕರಾದ ತೋಟಪ್ಪ ಎಸ್.ಗಾಣಿಗೇರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
