ಕಳ್ಳತನ ಪ್ರಕರಣಗಳ ಪತ್ತೆ ಬಗ್ಗೆ ಪೊಲೀಸ್ ಇಲಾಖೆ ಗಂಭೀರ ಚಿಂತನೆ : ಡಿವೈಎಸ್ಪಿ.

ಚಳ್ಳಕೆರೆ

    ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಹಾಡುಹಗಲೇ ಕಳ್ಳತನ ಪ್ರಕರಣ ನಡೆಯುತ್ತಿದ್ದು, ಸಾರ್ವಜನಿಕರು ಕಳವಳಗೊಂಡಿದ್ದು, ಪೊಲೀಸ್ ಇಲಾಖೆ ಕಳ್ಳತನ ಪ್ರಕರಣಗಳ ಪತ್ತೆ ಬಗ್ಗೆ ಹೆಚ್ಚು ಜಾಗೃತೆ ವಹಿಸಿದೆ ಎಂದು ಉಪವಿಭಾಗದ ಡಿವೈಎಸ್ಪಿ ಕೆ.ವಿ.ಶ್ರೀಧರ್ ತಿಳಿಸಿದರು.

   ಅವರು, ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಗೋಪನಹಳ್ಳಿ, ಅಡವಿಚಿಕ್ಕೇನಹಳ್ಳಿ, ಹುಲಿಕುಂಟೆ ಮುಂತಾದ ಗ್ರಾಮಗಳಲ್ಲಿ ಕಳ್ಳರು ಹಾಡುಹಗಲೇ ಆಗಮಿಸಿ ನಕಲಿ ಬೀಗದ ಕೈಗಳನ್ನು ಉಪಯೋಗಿಸಿ ಕಳ್ಳತನ ಮಾಡಿರುವ ಪ್ರಕರಣಗಳು ನಡೆದ ಹಿನ್ನೆಲೆಯಲ್ಲಿ ಕಳ್ಳತನವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

   ಗೋಪನಹಳ್ಳಿಯ ಬಸ್ ನಿಲ್ದಾಣದ ಬಳಿ ಸಾರ್ವಜನಿಕರೊಂದಿಗೆ ಕಳ್ಳತನ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿದ ಡಿವೈಎಸ್ಪಿ, ಮನೆಗಳಲ್ಲಿ ಬಂಗಾರ ಹಾಗೂ ನಗದು ಹಣವನ್ನು ಹೆಚ್ಚು ಪ್ರಮಾಣದಲ್ಲಿ ಇಟ್ಟುಕೊಳ್ಳದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಚಳ್ಳಕೆರೆ ನಗರ ಹಾಗೂ ಸುತ್ತಮುತ್ತಲ ಪ್ರದೇಶದ ಬ್ಯಾಂಕ್‍ಗಳಲ್ಲಿ ಲಾಕರ್‍ಗಳ ಸೌಲಭ್ಯವಿದ್ದು, ಅಲ್ಲಿ ನಿಮ್ಮ ಬಂಗಾರ ಆಭರಣಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.

    ಮನೆಗಳಿಗೆ ಭದ್ರವಾದ ಬೀಗ, ಡೋರ್‍ಲಾಕ್ ಹಾಗೂ ಸೈರನ್ ಸಹ ಅಳವಡಿಸಿದರೆ ಕಳ್ಳರು ಬಂದಾಗ ಸೈರನ್ ಆದರೆ ಎಲ್ಲರೂ ಎಚ್ಚರಗೊಂಡು ಕಳ್ಳರನ್ನು ಬಂಧಿಲು ಸಾಧ್ಯವಾಗುತ್ತದೆ ಎಂದರು. ಗ್ರಾಮಕ್ಕೆ ಬರುವ ಅಪರಿಚಿತ ವಾಹನ, ಜನರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದರು.

    ಪಿಎಸ್‍ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ ಮಾತನಾಡಿ, ಜಮೀನುಗಳಲ್ಲಿ ವಾಸವಿದ್ದು, ಮನೆಗಳಲ್ಲಿ ಹಣ, ಬಂಗಾರವಿಟ್ಟರೆ ಅದು ಕಳ್ಳರಿಗೆ ಅನುಕೂಲ ಮಾಡಿಕೊಟ್ಟಂತೆ ದಯಮಾಡಿ ಪ್ರತಿಯೊಬ್ಬರು ನಿಮ್ಮಲ್ಲಿರುವ ಹಣ ಹಾಗೂ ಒಡವೆಗಳನ್ನು ಬ್ಯಾಂಕ್‍ನಲ್ಲಿಟ್ಟು ರಕ್ಷಣೆ ಮಾಡಿಕೊಳ್ಳಬೇಕು. ಈಗಾಗಲೇ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪತ್ತೆ ಕಾರ್ಯ ಆರಂಭವಾಗಿದ್ದು ಶೀಘ್ರದಲ್ಲೇ ಕಳ್ಳರನ್ನು ಪತ್ತೆಹಚ್ಚುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಸದಸ್ಯ ತಿಪ್ಪೇಸ್ವಾಮಿ, ಲಕ್ಕಣ್ಣ, ಶ್ರೀನಿವಾಸ್, ಮಹಂತೇಶ್, ತಿಮ್ಮಣ್ಣ, ರಾಜಣ್ಣ, ತಿಪ್ಪೇರುದ್ರಪ್ಪ, ದೇವರಾಜ್, ಚೇತನ್, ವೆಂಕಟೇಶ್ ಮುಂತಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link