ಕೈ-ದಳದ ಮೈತ್ರಿ ಅಸಾಧ್ಯ : ಅಶೋಕ್

ಬೆಂಗಳೂರು

     ಉಪಚುನಾವಣೆಯ ಫಲಿತಾಂಶದ ದಿನವಾದ ಡಿ. 9ರಂದು ಸಿಹಿ ಸುದ್ದಿನೀಡುವುದಾಗಿ ಹೇಳಿರುವ ಕಾಂಗ್ರೆಸ್-ಜೆಡಿಎಸ್ನವರು ಮರು ಮೈತ್ರಿ ಮಾಡಿಕೊಳ್ಳುವ ಮನಸ್ಸಿದ್ದರೆ ರಾಜ್ಯಸಭಾ ಉಪಚುನಾವಣೆಯಲ್ಲಿ ಒಂದಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದಾಗಿತ್ತಲ್ಲ? ಎಂದು ಹೇಳಿರುವ ಕಂದಾಯ ಸಚಿವ ಆರ್. ಅಶೋಕ್ ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ಡಿ. 9ಕ್ಕೂ ಮೊದಲೇ ಸಿಹಿಸುದ್ದಿ ನೀಡಿದೆ ಎಂದರು.

     ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಭಿಕ್ಷುಕರ ರೀತಿ ವರ್ತಿಸುತ್ತಿದ್ದಾರೆ. ಇವರು ಆಜಾ ಆಜಾ ಎನ್ನುತ್ತಿದ್ದರೆ, ದೇವೇಗೌಡರು ಕಬಿ ನಹೀ ಕಬಿ ನಹೀ ಅನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಉಪಚುನಾವಣೆ ನಂತರ ಎರಡೂ ಪಕ್ಷಗಳ ಮೈತ್ರಿ ಸಾಧ್ಯವೇ ಇಲ್ಲ, ಮೈತ್ರಿ ಮಾಡಿಕೊಳ್ಳುವುದಿದ್ದರೆ ರಾಜ್ಯಸಭೆಯಲ್ಲಿ ಇಬ್ಬರು ಸೇರಿ ಅಭ್ಯರ್ಥಿಯಾಗಬಹುದಿತ್ತು. ಎರಡೂ ಪಕ್ಷದ ನಾಯಕರಿಗೂ ಗೊತ್ತಿದೆ. ಉಪಚುನಾವಣೆಯಲ್ಲಿ ಬಹುಮತ ಪಡೆಯುತ್ತದೆ ಎಂಬುದು ಎಂದರು.

     ಉಪಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ಸ್ಥಾನದಲ್ಲೂ ಗೆಲ್ಲುತ್ತದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಮತ್ತೆ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಯಾಕೆ ನಿಲ್ಲಿಸಲಿಲ್ಲ. ಕಾಂಗ್ರೆಸ್ಸಿಗರು ಹತಾಶರಾಗಿ ಬರಗೆಟ್ಟು ಹೋಗಿದ್ದಾರೆ ಎಂದು ಹರಿಹಾಯ್ದರು.ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಹಾಕದೇ ಇರುವುದು ಚುನಾವಣೆಗೂ ಮುನ್ನ ಎರಡೂ ಪಕ್ಷಗಳು ಶಸ್ತ್ರ ತ್ಯಾಗ ಮಾಡಿರುವುದನ್ನು ತೋರಿಸಿವೆ ಎಂದು ಸಚಿವ ಅಶೋಕ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap