ಹಾಡ ಹಗಲೆ ಮಹಿಳೆಯ ಕೊಲೆ

ಪಾವಗಡ

       ಹಾಡ ಹಗಲೆ ಮಹಿಳೆಯನ್ನು ,ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಪಾವಗಡ ಪಟ್ಟಣದ ಬಳ್ಳಾರಿ ರಸ್ತೆಯ ಮಾರ್ಗದ ನೀರೀಕ್ಷಣಾ ಮಂದಿರದ ಮುಂಬಾಗದಲ್ಲಿ ಶನಿವಾರ ಬೆಳಿಗ್ಗೆ 10 ಘಂಟೆಗೆ ಜರುಗಿದೆ.

       ಕೊಲೆಯಾದ ಮಹಿಳೆಯನ್ನು ವೆಂಕಟಾಪುರ ಗ್ರಾಮದ ಕವಿತಾ 35 ಎಂದು ಗುರ್ತಿಸಲಾಗಿದ್ದು, ಗಂಡ ಬಾಲಾಜಿ ಈ ಕೊಲೆ ಮಾಡಿದ್ದಾನೇ ಅಥವಾ ಬೇರೆ ಯಾರಾದರೂ ಈ ಕೊಲೆ ಮಾಡಿದ್ದಾರೆ ಎಂಬುದನ್ನು ಪೋಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.
ಈ ಸುದ್ದಿಯಿಂದ ಬೆಚ್ಚಿಬಿದ್ದ ಪಾವಗಡದ ಜನತೆ ತಂಡೊಪತಂಡವಾಗಿ ಸರ್ಕಾರಿ ಆಸ್ಪತ್ರೆಗೆ ದಾವಿಸಿ ಕವಿತಾ ಮೃತ ದೇಹವನ್ನು ನೋಡಿ ಮಮ್ಮಲ ಮರುಗುತ್ತಿದ್ದಾರೆ.

       ಅಂಧ್ರದ ರೊದ್ದಂ ಮಂಡಲದ ತುರಕಲಾಪಟ್ನಂ ಗ್ರಾಮದ ಕವಿತಾಳನ್ನು 15 ವರ್ಷ ಗಳ ಹಿಂದೆ ವೆಂಕಟಾಪುರ ಗ್ರಾಮದ ಬಾಲಾಜಿ ಗೆ ಮದುವೆ ಮಾಡಿಕೊಡಲಾಗಿತ್ತು, ಇಬ್ಬರು ಗಂಡು ಮಕ್ಕಳಿದ್ದು, ಕಳೆದ 8 ತಿಂಗಳ ಹಿಂದೆ ಗಂಡ ಹೆಂಡತಿ ನಡುವೆ ಸಂಸಾರದಲ್ಲಿ ಬಿರುಕುಂಟಾಗಿದ್ದು,

        ಕವಿತಾ ಗಂಡನನ್ನು ತೊರೆದು ತನ್ನ ತವರು ಮನೆ ತುರುಕಲಾಪಟ್ನಂ ನಲ್ಲಿ ವಾಸ ಇದ್ದು, ಪಾವಗಡದ ಜೆ.ಂ.ಎಫ್. ಸಿ. ನ್ಯಾಯಾಲಯದಲ್ಲಿ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದಳು ಎನ್ನಲಾಗಿದೆ, ಈ ಸಂಬಂದ ಶನಿವಾರ ನ್ಯಾಯಾಲಯಕ್ಕೆ ಹಾಜರಾಗಲು ಬರುತ್ತಿದ್ದ ಈ ವೇಳೆ ಕೊಲೆ ಮಾಡಲಾಗಿದ್ದು, ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಆಗುಂತಕ ಮೊದಲೆ ತನ್ನ ಬೈಕಿನಲ್ಲಿ ಕಾದು ಕುಳಿತಿದ್ದು, ಕವಿತಾಳನ್ನು ಕಂಡು ಕೂಡಲೆ ಜಗಳ ತೆಗೆದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ತನ್ನ ಬೈಕ್ ನಲ್ಲಿ ಪರಾರಿಯಾಗಿದ್ದಾನೆ.ಘಟನೆ ನಡೆದ ಸ್ಥಳಕ್ಕೆ ಪಾವಗಡ ಸಿ.ಐ. ವೆಂಕಟೇಶ್, ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಮಹಜರು ನಡೆಸಿ ವೆಂಕಟಾಪುರ ಗ್ರಾಮಕ್ಕೆ ತೆರಳಿದ್ದು ಬಾಲಾಜಿ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link