ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿ: ಯುವತಿ ಸಾವು

ತಿಪಟೂರು

       ಮದುವೆಯ ಕನಸನ್ನು ಹೊತ್ತು ಜಾತ್ರೆಗೆ ತೆರಳುತ್ತಿದ್ದು, ದ್ವಿಚಕ್ರವಾಹನಕ್ಕೆ ಯಮಸ್ವರೂಪಿಯಾಗಿ ಬಂದಂತಹ ಲಾರಿಯು ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮವಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಜರುಗಿದೆ.

      ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ, ಕರಡಿ ಗ್ರಾಮದ ರಂಗನಾಥಪುರದ ಬಳಿ ನಡೆದಿದ್ದು ಬೆಂಗಳೂರಿನಿಂದ ಅರಸೀಕೆರೆಯ ಜಾತ್ರೆಗೆ ಹೊರಟಿದ್ದ ದ್ವಿಚಕ್ರವಾಹನ ಕೆ.ಎ. 06 ಹೆಚ್.ಡಿ 6879ಗೆ ಹಿಂದಿನಿಂದ ವೇಗವಾಗಿ ಬಂದ ಟಿ.ಎನ್ 28 ಎ.ಇ.9222 ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ದಾಕ್ಷಾಯಣಿ (20) ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಶಿವರಾಜ್‍ಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಕರಣ ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link