ಶಂಕರಾಚಾರ್ಯರಿಂದ ಹಿಂದೂಧರ್ಮ ಪುನರುಜ್ಜೀವನ

ಚಿತ್ರದುರ್ಗ:

    ಭಾರತ ದೇಶಾದ್ಯಂತ ಸಂಚರಿಸಿ ಸನಾತನ ಹಿಂದೂ ಧರ್ಮವನ್ನು ಪುನರಜ್ಜೀವನಗೊಳಿಸಿದವರು ಶಂಕರಾಚಾರ್ಯರು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಹೇಳಿದರು.

     ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸರಳವಾಗಿ ಆಯೋಜಿಸಿದ್ದ ಶಂಕರಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸನಾತನ ಭಾರತದ ಸಂಸ್ಕತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಪ್ರಮುಖರಾದವರು ಶಂಕರಾಚಾರ್ಯರು.

     ಶಂಕರಚಾರ್ಯರು ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿ, ಭಾರತ ದೇಶಾದ್ಯಂತ ಸಂಚರಿಸಿ, ಅದರ ಅರ್ಥವನ್ನು ಸಮಾಜಕ್ಕೆ ಸಾರಿದರು. ಬ್ರಹ್ಮ ಎಲ್ಲೂ ಇಲ್ಲ, ನಿನ್ನಲ್ಲೆ ಇದ್ದಾನೆ. ಅದನ್ನು ಕಾಯಕನಿಷ್ಠೆಯಿಂದ ಕಾಣಬೇಕು ಎಂಬ ಸಂದೇಶವನ್ನು ಜನರಿಗೆ ಸಾರಿದರು. ಸಮಾಜದ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸಿ ಭಕ್ತಿ ಪಂಥವನ್ನು ಉನ್ನತೀಕರಿಸಿದವರಲ್ಲಿ ಶಂಕರಾಚಾರ್ಯರು ಪ್ರಮುಖರು ಎಂದರು
ಹಿಂದೂ ಧರ್ಮದ ಅವನತಿಯ ಸಂದರ್ಭದಲ್ಲಿ ಧರ್ಮಕ್ಕೆ ಪುನರುಜ್ಜೀವನ ನೀಡಿದರು. ಎಲ್ಲರಲ್ಲೂ ನಾವೆಲ್ಲ ಒಂದೇ, ಎನ್ನುವ ಭಾವನೆ ಬರಲಿ ಎಂದು ಶಂಕರಾಚಾರ್ಯರು ಹೇಳಿದರು.

      ಇಂತಹ ಮಹನಿಯರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಬೇಡ, ಆಚಾರ್ಯತ್ರಯರಲ್ಲಿ ಒಬ್ಬರಾದ ಶಂಕರಚಾರ್ಯರ ವಿಚಾರಧಾರೆಗಳು ಎಲ್ಲಾ ವರ್ಗದವರು, ಯುವಜನತೆ ಪ್ರಸ್ತುತ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಸತ್ಯಭಾಮ ಹೇಳಿದರು.

      ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಮಾತನಾಡಿ, ಸನಾತನ ಭಾರತದ ಸಂಸ್ಕತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಚಾರ್ಯರು ಪ್ರಮುಖರು ಎಂದು ಅಭಿಪ್ರಾಯ ಪಟ್ಟರು ಬಾಲ್ಯದಲ್ಲಿ ಶಂಕರರು ನದಿಯಲ್ಲಿ ಸ್ನಾನ ಮಾಡುವಾಗ ಮೊಸಳೆ ಅವರ ಕಾಲು ಹಿಡಿಯಿತು. ಶಂಕರರ ಕೂಗಾಟ ಕೇಳಿ ಅವರ ಮಾತೆ ಅಲ್ಲಿಗೆ ಧಾವಿಸಿ ಬಂದಾಗ ಮೊಸಳೆ ಒಂದು ಷರತ್ತು ಹಾಕಿತು, ನಿಮ್ಮ ಮಗನನ್ನು ಸನ್ಯಾಸಿಯನ್ನಾಗಿ ಮಾಡುತ್ತೇನೆಂದು ಮಾತು ಕೊಟ್ಟರೆ ಮಾತ್ರ ಬಿಡುತ್ತೇನೆ ಎಂದಿತಂತೆ, ಆಗ ಬೇರೆ ವಿಧಿಯಿಲ್ಲದೆ ಅವರ ಮಾತೆ ಅದಕ್ಕೆ ಒಪ್ಪಿಗೆ ಸೂಚಿಸಿ, ತನ್ನ ಮಗನನ್ನು ಸನ್ಯಾಸತ್ವ ಸ್ವೀಕರಿಸಲು ಅನುಮತಿ ನೀಡಿದರಂತೆ.

      ಅಲ್ಲಿಂದ ಶಂಕರರು ದೇಶವ್ಯಾಪಿ ಪರ್ಯಟನೆ ಮಾಡಿ ದೇಶದ ನಾಲ್ಕು ದಿಕ್ಕುಗಳಲ್ಲಿ ಬದರಿಪೀಠ, ಶೃಂಗೇರಿ ಪೀಠ, ಗೋವರ್ಧನ ಪೀಠ ಹಾಗೂ ದ್ವಾರಕ ಪೀಠಗಳನ್ನು ಸ್ಥಾಪಿಸಿ ಅದರೊಂದಿಗೆ ಸಮಾಜ ಸುಧಾರಣೆಗೆ ಅಡಿಪಾಯ ಹಾಕಿಕೊಟ್ಟರು ಎಂದು ಹೇಳಿದರು.
ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಮಂಜುನಾಥ ಮಾತನಾಡಿ, ಶಂಕರಚಾರ್ಯರು 32 ವರ್ಷ ದೇಶಾದ್ಯಂತ ಪರ್ಯಟನೆ ಮಾಡಿ, ಸನಾತನ ಧರ್ಮದ ವಿಚಾರಧಾರೆಗಳನ್ನು ಎಲ್ಲರಿಗೂ ತಲುಪಿಸಿ, ಸನಾತನ ಧರ್ಮದ ಉನ್ನತಿಗಾಗಿ ಶ್ರಮಿಸಿದರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

        ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಶಂಕರಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು, ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಹಾಗೂ ಬ್ರಾಹ್ಮಣ ಸಮಾಜದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಮೇರಿಕದಿಂದ ಆಗಮಿಸಿದ್ದ ಸೌಮ್ಯ ಪ್ರಾರ್ಥನೆ ಗಾಯನ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link