ಸದಸ್ಯರಿಗೆ 2.29 ಕೋಟಿ ರೂ.ಸಾಲ;ನಿಶಾನಿ ಜಯಣ್ಣ

ಚಿತ್ರದುರ್ಗ:

     ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದಾಗ ಮಾತ್ರ ಸಹಕಾರ ಸಂಘಗಳು ಅಭಿವೃದ್ದಿಯಾಗಿ ಲಾಭದತ್ತ ಸಾಗಲು ಸಾಧ್ಯ ಎಂದು ಸಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಸದಸ್ಯರುಗಳಿಗೆ ಕರೆ ನೀಡಿದರು.

       ಕೆ.ಎಸ್.ಆರ್.ಟಿ.ಸಿ.ನೂತನ ಬಸ್ ಡಿಪೋ ಸಮೀಪವಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ನಡೆದ 2017-18 ನೇ ಸಾಲಿನ 62 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಂಘದಲ್ಲಿ 3667 ಸದಸ್ಯರುಗಳಿದ್ದು, ಎರಡು ಕೋಟಿ 29 ಲಕ್ಷದ 81 ಸಾವಿರದ 135 ರೂ.ಗಳ ಸಾಲ ನೀಡಿದ್ದೇವೆ.

      ಷೇರು ಬಂಡವಾಳ 37 ಲಕ್ಷದ 54600 ರೂಗಳಿದ್ದು, 73 ಲಕ್ಷದ 53 ಸಾವಿರದ 774 ರೂ.ಗಳ ಠೇವಣಿಯಿದೆ. ನಾಲ್ಕು ಲಕ್ಷ 27 ಸಾವಿರದ 163 ರೂ.ಲಾಭದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 445 ಸದಸ್ಯ ರೈತರಿಗೆ 1 ಕೋಟಿ 89 ಲಕ್ಷ ರೂ. ಸಾಲ ಮನ್ನ ಆಗುವ ಸಾಧ್ಯತೆಯಿದೆ. ಸಂಘದ ಹೊಸ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿರುವುದಾಗಿ ಹೇಳಿದರು.

       2017-18 ನೇ ಸಾಲಿನ ಆಡಳಿತ ಮಂಡಳಿಯ ವರದಿ ಪರಿಶೀಲಿಸುವುದು. ಆಡಿಟ್ ಆದ ಲೆಕ್ಕಗಳ ಪರಿಶೀಲನೆ. ಬಜೆಟ್‍ಗಿಂತ ಹೆಚ್ಚಿನ ಖರ್ಚಿಗೆ ಮಂಜೂರಾತಿ. ಸಂಘಕ್ಕೆ ಹೊರಗಿನಿಂದ ತರುವ ಸಾಲಗಳ ಪರಿಮಿತಿಯನ್ನು ನಿರ್ಧರಿಸುವುದು, 2018-19 ನೇ ಸಾಲಿನ ಲೆಕ್ಕ ಪರಿಶೋಧನೆ ನಡೆಸಲು ಲೆಕ್ಕಪರಿಶೋಧಕರು ಲೆಕ್ಕಪರಿಶೋಧನಾ ಫರ್ಮನ್ನು ನೇಮಿಸಿಕೊಳ್ಳುವ ವಿಚಾರ ಹಾಗೂ ಸಹಕಾರ ಕಾಯ್ದೆ ಇತ್ತೀಚೆಗೆ ತಿದ್ದುಪಡಿ ಆಗಿರುವ ಹಿನ್ನೆಲೆಯಲ್ಲಿ ಸಂಘದ ಸಮಗ್ರ ಬೈಲಾ ತಿದ್ದುಪಡಿ ಮಾಡಿಕೊಳ್ಳುವ ಸಂಬಂಧ ಮಹಾಸಭೆಯಲ್ಲಿ ಸದಸ್ಯರೊಂದಿಗೆ ಎಂ.ನಿಶಾನಿ ಜಯಣ್ಣ ಚರ್ಚಿಸಿದರು.

      ಬೆಳೆ ಸಾಲ ಪಡೆದ ಸಂಘದ ಸದಸ್ಯರು ಅವಧಿಯೊಳಗೆ ಸಾಲ ಮರುಪಾವತಿ ಮಾಡಿದಲ್ಲಿ ಬಡ್ಡಿ ರಹಿತ ಸಾಲ ಪಡೆಯಲು ಅರ್ಹರಿರುತ್ತಾರೆ. ಪಾನ್ ಕಾರ್ಡ್‍ನ್ನು ಕಡ್ಡಾಯವಾಗಿ ಮಾಡಿಸತಕ್ಕದ್ದು ಎಂದು ತಿಳಿಸಿದರು.

      ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಕಲಾವತಿ, ನಿರ್ದೇಶಕರುಗಳಾದ ಎ.ಈಶ್ವರಪ್ಪ, ಸಿ.ಹೆಚ್.ಸೂರ್ಯಪ್ರಕಾಶ್, ಟಿ.ಶೇಕಮ್ಮ, ಎಸ್.ಜಯಣ್ಣ, ಹೆಚ್.ಆರ್.ನಾರಾಯಣಸ್ವಾಮಿ, ಕೆ.ಚಿಕ್ಕಣ್ಣ, ಎಸ್.ಪ್ರಹ್ಲಾದಪ್ಪ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಟಿ.ರಾಮಸ್ವಾಮಿ ವೇದಿಕೆಯಲ್ಲಿದ್ದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link