ಹಿರಿಯೂರು:
ಹಿರಿಯೂರಿನಲ್ಲಿ ಮಾಜಿ ಸಚಿವರಾದ ಡಿ.ಸುಧಾಕರ್ರವರ ಕಛೇರಿಯಲ್ಲಿ ತಾಲ್ಲೂಕು ಬ್ಲಾಕ್ಕಾಂಗ್ರೆಸ್ ಎಸ್ಸಿ ಘಟಕದ ವತಿಯಿಂದ ನೂತನವಾಗಿ ಆರಂಭವಾಗಿರುವ ಧ್ವನಿಶಕ್ತಿ ಕೇಂದ್ರದ ಮತ್ತು ಮುಂಬರುವ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಪ್ರಧಾನ ರಾಜಪ್ಪನವರು ಮಾತನಾಡಿ, ಈ ಒಂದು ಧ್ವನಿ ಶಕ್ತಿ ಕೇಂದ್ರಕ್ಕೆ ಯುವ ಕಾರ್ಯಕರ್ತರನ್ನು ಸೇರ್ಪಡಿಸುವುದರ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾವಿ ಪ್ರಧಾನ ಮಂತ್ರಿಗಳಾದ ಶ್ರೀರಾಹುಲ್ಗಾಂಧಿರವರ ಕೈಬಲಪಡಿಸುವುದರ ಮೂಲಕ ಕಾಂಗ್ರೆಸ್ ಎಸ್ಸಿ ಘಟಕದ ಕಾರ್ಯಕರ್ತರು ಸಿದ್ದರಾಗಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಎಸ್.ಸಿ.ಘಟಕದ ಅಧ್ಯಕ್ಷರಾದ ಜಿ.ಎಲ್.ಮೂರ್ತಿಯವರು ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಭೂತೇಶ್, ಜಿಲ್ಲಾ ಉಪಾಧ್ಯಕ್ಷರಾದ ಕೆಂಚರಾಜು, ಗ್ರಾಮಾಂತರ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರ ಎಸ್ಸಿ ಘಟಕದ ಚಂದ್ರನಾಯ್ಕ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿಯವರಾದ ರವಿಕುಮಾರ್, ಮಹಂತೇಶ್, ಗಾಂಧಿನಗರ, ಧರ್ಮಪುರ ಹೋಬಳಿ ಉಪಾಧ್ಯಕ್ಷರಾದ ಗಂಗಾಧರನಾಯ್ಕ್, ಐಮಂಗಲ ಹೋಬಳಿ ಕಾರ್ಯದರ್ಶಿಗಳಾದ ಚಂದ್ರು ಭರಂಪುರ ಸಿದ್ದೇಶ್, ಎಂ.ಡಿ.ಕೋಟೆ, ಮಾರುತಿ ಗೂಳ್ಯ, ರಾಜಪ್ಪ, ಚಿಲ್ಲಹಳ್ಳಿ, ಜ್ಯೋತಣ್ಣ, ಕಾಂಗ್ರೆಸ್ ಮುಖಂಡರಾದ ಕೃಷ್ನಾಪುರ ಕೃಷ್ಣಮೂರ್ತಿ, ಜೀವೇಶ್, ಬೋರನಕುಂಟೆ ಕಂಬತ್ತಹಳ್ಳಿ ರಂಗಸ್ವಾಮಿ, ನಗರ ಎಸ್.ಸಿ.ಘಟಕದ ಉಪಾಧ್ಯಕ್ಷರಾದ ಜ್ಞಾನೇಶ್ ಬಿಎಲ್ಗೌಡ ನಗರ, ನಗರ ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ಡಿ.ಸಿ.ಕಾಲೋನಿ, ಹೆಚ್.ರಾಜಣ್ಣ, ನಂದಕುಮಾರ್, ಕುಮಾರ್, ಬಾಲೇನಹಳ್ಳಿ, ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ವಿಜಯಕುಮಾರ್ ಟಿಬಿ ಸರ್ಕಲ್, ರಂಗಸ್ವಾಮಿ, ಚಿಲ್ಲಹಳ್ಳಿ, ನಾಗರಾಜು ವಕೀಲರು, ಮಾಳಗೊಂಡನಹಳ್ಳಿ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ