ಜನಪದ ಕಲಾ ಸಂಭ್ರಮಕ್ಕೆ ಚಾಲನೆ

ಚಿತ್ರದುರ್ಗ:

      ಕಣ್ಮೆರೆಯಾಗುತ್ತಿರುವ ಜಾನಪದ ಕಲೆಯನ್ನು ಉಳಿಸಬೇಕಾಗಿದೆ ಎಂದು ನಿವೃತ್ತ ಪ್ರೊ.ಪರಮೆಶ್ವರಪ್ಪ ಹೇಳಿದರು.ಮದಕರಿನಾಯಕ ಸಾಂಸ್ಕøತಿಕ ಕೇಂದ್ರ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರುಗಳ ಸಹಯೋಗದೊಂದಿಗೆ ವದ್ದಿಕೆರೆಯಲ್ಲಿರುವ ಸಿದ್ದಪೀಠ ಶ್ರೀಗುರುಕರಿಬಸವೇಶ್ವರಸ್ವಾಮಿ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾನಪದ ಸಂಭ್ರಮವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

       ಪುರಾಣ, ಉಪದೇಶ, ಆಧ್ಯಾತ್ಮ, ವಚನಗಳನ್ನು ಕೇಳುವುದರಿಂದ ಮಲಿನಗೊಂಡ ಮನಸ್ಸುಗಳನ್ನು ಸರಿಪಡಿಸಬಹುದಾಗಿದೆ. ಜಾನಪದ, ತತ್ವಪದ, ಭಜನೆ, ಗೀಗಿಪದ, ಕೋಲಾಟ, ನಂದಿಕೋಲು ಇವುಗಳೆಲ್ಲಾ ನಶಿಸಿ ಹೋಗುತ್ತಿವೆ. ಹಳ್ಳಿಗಳನ್ನು ತೊರೆದು ನಗರಗಳತ್ತ ಮುಖಮಾಡುತ್ತಿರುವ ಇಂದಿನ ಪೀಳಿಗೆಯನ್ನು ಜಾನಪದ ಜಗತ್ತಿಗೆ ಹಿಂದಿರುಗಿಸಬೇಕಿದೆ. ಜಾನಪದ ಹಾಡು, ನೃತ್ಯಗಳು ಹುಟ್ಟಿಕೊಂಡಿದ್ದೆ ಗ್ರಾಮೀಣ ಭಾಗದಿಂದ ಹಾಗಾಗಿ ಇಂದಿನ ಆಧುನಿಕ ಜಗತ್ತಿಗೆ ಜಾನಪದ ಹಾಡು ಅತ್ಯವಶ್ಯಕವಾಗಿದೆ ಎಂದು ಹೇಳಿದರು.

       ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಜಾನಪದ ಹಾಡುಗಳು ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಜೀವಂತವಾಗಿದೆ. ಜಾನಪದ, ತತ್ವಪದಗಳನ್ನು ಕೇಳಿ ಅನೇಕರು ಮನಸ್ಸುಗಳನ್ನು ಮನಪರಿವರ್ತನೆ ಮಾಡಿಕೊಂಡಿದ್ದಾರೆ. ಜಾನಪದಕ್ಕೆ ಅಂತಹ ಅದ್ಬುತವಾದ ಶಕ್ತಿ ಇದೆ ಎಂದು ತಿಳಿಸಿದರು.

       ಜಾನಪದ, ತತ್ವಪದ, ಭಜನೆ, ಕೋಲಾಟವನ್ನು ಕೇಳುವುದರಿಂದ ಮನಸ್ಸಿಗೆ ಮುದ ನೀಡುತ್ತದೆ. ಸಂಗೀತ, ಸಾಹಿತ್ಯ, ಭರತನಾಟ್ಯ ಹುಟ್ಟಿಕೊಂಡಿದ್ದೆ ಜನಪದದಿಂದ. ಅದಕ್ಕಾಗಿ ಜಾನಪದ ಎಲ್ಲಾ ಕಲೆಗಳ ತಾಯಿಬೇರು ಇದ್ದಂತೆ. ಜಾನಪದಕ್ಕೆ ಅಂತಹ ಮಹತ್ವವಿದೆ ಎಂದರು.

       ಸಿದ್ದಪೀಠ ಶ್ರೀಗುರುಕರಿಬಸವೇಶ್ವರಸ್ವಾಮಿ ಮಠದ ಕಾಂತರಾಜು ಮಾತನಾಡುತ್ತ ಹೃದಯಂದಿಂದ ಹೃದಯಕ್ಕೆ, ಬಾಯಿಂದ ಬಾಯಿಗೆ, ಮಾತಿನಿಂದ ಮಾತಿಗೆ ಹರಿದು ಬಂದಿರುವ ಜನಪದ, ತತ್ವಪದ, ನರಹರಿಪದ, ದಾಸರಪದ, ಕೈವಲ್ಯ ಪದ್ದತಿಯಿಂದ ಕೂಡಿದೆ. ಗುರು ಅಜ್ಞಾನವನ್ನು ಕಳೆದು ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುತ್ತಾನೆ. ಆದ್ದರಿಂದ ಪ್ರತಿಯೊಬ್ಬರಿಗೂ ಗುರುವಿರಬೇಕು ಎಂದು ಹೇಳಿದರು.
ಪ್ರತಿಯೊಬ್ಬರ ಬದುಕು ಸುಂದರ, ಅರ್ಥಪೂರ್ಣವಾಗಿರಬೇಕಾದರೆ ಆಧ್ಯಾತ್ಮಕ ಸಂಸ್ಕಾರ ಬೇಕು. ಅವಧೂತ ಪರಂಪರೆಯಿಂದ ಬಂದ ಸಂಸ್ಕಾರಗಳನ್ನು ಉಳಿಸುವ ಜವಾಬ್ದಾರಿ ಗ್ರಾಮೀಣ ಜಾನಪದರ ಮೇಲಿದೆ ಎಂದು ಎಚ್ಚರಿಸಿದರು.

        ಶಿಕ್ಷಕ ಶಿವಣ್ಣ ಮಾತನಾಡಿ ದಿನಮಾನಗಳು ತುಂಬಾ ಕೆಟ್ಟು ಹೋಗಿವೆ. ಯುವ ಜನಾಂಗ ಮೊಬೈಲ್, ವಾಟ್ಸ್‍ಪ್, ಫೇಸ್‍ಬುಕ್, ಇಂಟರ್‍ನೆಟ್ ಗೀಳು ಹಚ್ಚಿಕೊಂಡು ಕೆಟ್ಟ ದಾರಿಯಲ್ಲಿ ಸಾಗುತ್ತಿದ್ದಾರೆ. ಇದರಿಂದ ಮನುಷ್ಯ-ಮನುಷ್ಯನ ನಡುವಿನ ಸಂಬಂಧ ಕಡಿದು ಹೋಗುತ್ತಿದೆ. ಉನ್ನತಿಯ ಹಾದಿಗೆ ದುಶ್ಚಟ ಮುಳ್ಳಾಗಿದೆ. ಹಾಗಾಗಿ ಇಂತಹ ಜಾನಪದ ಕಲೆಗಳತ್ತ ಇಂದಿನ ಪೀಳಿಗೆಯನ್ನು ಸೆಳೆಯುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು.

        ಸಂಗೀತ ಶಿಕ್ಷಕ ಹನುಮಂತಪ್ಪ, ಕೂನಿಕೆರೆ ರಾಮಣ್ಣ, ನಿವೃತ್ತ ಶಿಕ್ಷಕ ಶ್ರೀರಂಗನಾಥ್, ರಾಮಸ್ವಾಮಿ, ಹನುಮಣ್ಣ, ಸೋಮಣ್ಣ, ಭದ್ರಣ್ಣ, ರತ್ನಕ್ಕ ಇನ್ನು ಮೊದಲಾದರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link