ನ್ಯಾಯಾಲಯದ ಆದೇಶಕ್ಕೆ ಶಾಸಕ ಸತ್ಯನಾರಾಯಣ್ ಅಸಮಾಧಾನ

ಶಿರಾ

       ಶಿರಾ ಎ.ಪಿ.ಎಂ.ಸಿ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಪ್ರಕ್ರಿಯೆಗೆ ಅವಕಾಶ ನೀಡಿರುವ ರಾಜ್ಯ ಶ್ರೇಷ್ಠ ನ್ಯಾಯಾಲಯವು ಫಲಿತಾಂಶಕ್ಕೆ ಮಾತ್ರ್ರ ತಡೆಯಾಜ್ಞೆ ನೀಡಿದ್ದು, ಫಲಿತಾಂಶ ತಡೆಗೆ ಸೂಕ್ತ ನಿಯಮಾವಳಿಯನ್ನೂ ಪಾಲಿಸಿಲ್ಲ ಎಂದು ಶಾಸಕ ಬಿ.ಸತ್ಯನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

       ಎ.ಪಿ.ಎಂ.ಸಿ. ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯ ಸಂಬಂಧ ಮತಗಟ್ಟೆಯ ಹೊರಭಾಗದಲ್ಲಿ ಬೆಳಗ್ಗೆಯಿಂದಲೂ ಠಿಕಾಣಿ ಹೂಡಿದ್ದ ಬಿ.ಸತ್ಯನಾರಾಯಣ್, ನ್ಯಾಯಾಲಯದ ಆದೇಶದ ಪ್ರತಿಗಳು ಹಾಗೂ ಫಲಿತಾಂಶ ಪ್ರಕಟಣೆಗೆ ನ್ಯಾಯಾಲಯ ನೀಡಿದ ಕಾರಣಗಳನ್ನು ಕಂಡು ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದರು.

        ನಾನೂ ಕೂಡ ಓರ್ವ ವಕೀಲನಾಗಿ ಕೆಲಸ ಮಾಡಿದ್ದೇನೆ. ಹತ್ತಾರು ಚುನಾವಣೆಗಳನ್ನು ಕೂಡ ಎದುರಿಸಿದ್ದೇನೆ. ಟಿಎಪಿಸಿಎಂಎಸ್ ನಿಂದ ಆಯ್ಕೆಯಾಗಿದ್ದ ನಿರ್ದೇಶಕರೊಬ್ಬರು ತಮ್ಮ ಸ್ಥಾನವನ್ನು ವಜಾ ಮಾಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.

        ನ್ಯಾಯಾಲಯ ಈ ಬಗ್ಗೆ ವಿಚಾರಣೆ ನಡೆಸಿ ಅವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟು, ಫಲಿತಾಂಶವನ್ನು ಪ್ರಕಟಣೆ ಮಾಡದಂತೆ ತಡೆಯಾಜ್ಞೆ ನೀಡಿದ್ದು ಸರಿಯಷ್ಟೆ. ಆದರೆ ಮತ ಎಣಿಕೆಯ ಫಲಿತಾಂಶವನ್ನು ತಡೆ ಹಿಡಿಯಲು ಚುನಾವಣಾಧಿಕಾರಿಗಳಿಗೆ ಘನ ನ್ಯಾಯಾಲಯವು ಆದೇಶ ನೀಡುವುದರ ಬದಲಾಗಿ ಎ.ಪಿ.ಎಂ.ಸಿ. ಕಾರ್ಯದರ್ಶಿಗಳಿಗೆ ನೀಡಿರುವುದು ಸೂಕ್ತವೆನಿಸುತ್ತಿಲ್ಲ ಎಂದರು.

        ಈ ನಡುವೆ ಚುನಾವಣಾ ಫಲಿತಾಂಶ ಪ್ರಕಟಣೆಗೆ ತಡೆಯಾಜ್ಞೆ ನೀಡಿದ್ದರೂ ಜೆ.ಡಿ.ಎಸ್. ಬೆಂಬಲಿತ ಅಭ್ಯರ್ಥಿಗಳು ವಿಜೇತರಾಗುವುದು ಖಚಿತವೂ ಆಗಿದೆ. ಅಧಿಕೃತ ಫಲಿತಾಂಶಕ್ಕಷ್ಟೆ ಕಾಯಬೇಕಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap