ಜಗಳೂರು:
ವೈ.ರಾಮಪ್ಪನವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕೆ ಹೊರತು ಉದ್ರಿಕ್ತರಾಗಿ ಕಾಲೇಜು ಮತ್ತು ಅವರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸುವುದು ಖಂಡನೀಯ ಎಂದು ಮಾಜಿ.ತಾ.ಪಂ ಸದಸ್ಯ ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಶನಿವಾರ ಪ್ರಗತಿಪರ ಸಂಘಟನೆಗಳು ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ದಲಿತ ಸಮುದಾಯದವರು ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವದೇ ವಿರಳಅಂತಹದರಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಸಾರ್ವಜನಿಕ ವಲಯದಲ್ಲಿ ನೂರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.ಈ ಕಾಲೇಜಿನ ಕಟ್ಟಡದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿರುವುದು ಮೂರ್ಖತನದ ಪರಮಾವಧಿಯಾಗಿದೆ ಎಂದರು.
ರಾಮಪ್ಪನವರು ವಿಶ್ವವಿದ್ಯಾನಿಲಯದಲ್ಲಿ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.ಅಲ್ಲದೇ ಪ್ರಗತೀಪರ ಚಿಂತನಾಶೀಲ ಮೈಗೂಡಿಸಿಕೊಂಡು ಹಲವಾರು ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿ ಉತ್ತಮ ಆಡಳಿತ ನಡೆಸಿದ್ದಾರೆ ಇಂತಹ ಸಂಘಟನಾ ಶಕ್ತಿಯಾಗಿರುವ ವ್ಯಕ್ತಿಯನ್ನು ದಲಿತ ಎಂಬ ಕಾರಣಕ್ಕೆ ಅವರನ್ನು ತೇಜೋವಾದಿ ಮಾಡುವುದು ಸರಿಯಲ್ಲ ಇದು ಮುಂದುವರೆದರೆ ದಲಿತ ಸೈನ್ಯವನ್ನು ಜಗಳೂರಿನಿಂದ ಕಟ್ಟಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಗ್ರಾ.ಪಂ ಅದ್ಯಕ್ಷ ಚಿಕ್ಕಮ್ಮನಹಟ್ಟಿ ಕಾಟಪ್ಪ ಮಾತನಾಡಿ,ರಾಮಪ್ಪನಿಗೆ ಮಾಡಿದ ಅವಮಾನ ಇಡೀ ದಲಿತ ಸಮುದಾಯದ ಮೇಲೆ ಮಾಡಿದ ಅನ್ಯಾಯವಾಗಿದೆ.ಗ್ರಾಮೀಣ ಭಾಗದಲ್ಲಿ ಎಲ್ಲಾ ಸಮುದಾಯದವರು ಅನ್ಯೂನ್ಯತೆಯಿಂದ ಬದುಕುತ್ತಾರೆ ಇಂತಹ ಸಲಿಗೆಯಿಂದ ಸ್ನೇಹಿತರ ಮದ್ಯೆ ನಡೆದ ಸಂವಾದವನ್ನು ವೀಡಿಯೋ ಚಿತ್ರೀಕರಿಸಿ ವೈರಲ್ ಆಗಿ ಮಾಡುವ ಕೋಮುವಾದಿ ಮನಸ್ಥಿತಿಯುಳ್ಳವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡ ಶಂಭುಲಿಂಗಪ್ಪ ಮಾತನಾಡಿ,ಜಾತ್ಯಾತೀತ ವ್ಯವಸ್ಥೆಯಲ್ಲಿ ಶೋಷಿತರ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಸ್ವತಂತ್ರ ಕಳೆದು 7 ದಶಕಗಳು ಕಳೆದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ ದಲಿತರ ಮೇಲಿನ ದೌರ್ಜನ್ಯ , ಅಸಮಾನತೆಗಳು ನಡೆಯುತ್ತಿವೆ.ರಾಮಪ್ಪ ದಲಿತ ಹೋರಾಟಗಾರ ಚಿಂತಕ ಅವರ ಹಿಂದೆ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಕ್ಕೆ ಜನರಿದ್ದಾರೆ ಇದನ್ನು ಸಹಿಸದ ಮನುವಾದಿಗಳು ಸಂವಿಧಾನ ವಿರೋಧಿಯಾಘಿ ವರ್ತಿಸುತ್ತಿದ್ದಾರೆ.ಇದರಿಂದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುವ ಮೂಲಕ ಪ್ರಶ್ನಿಸುವ ಮನಸ್ಸುಗಳನ್ನು ಹತ್ತಿಕ್ಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶಿವಕುಮಾರ್, ನಾಗಲಿಂಗಪ್ಪ, ಡಿಎಸ್ಎಸ್ ತಾಲೂಕು ಅದ್ಯಕ್ಷ ಮಲೆಮಾಚಿಕೆರೆ ಸತೀಶ್, ಕೆಎಮ್ಎಸ್ ತಾ.ಅದ್ಯಕ್ಷ ಸತೀಶ್, ಮುಖಂಡರಾದ ಗೌರೀಪುರ ಕುಬೇರಪ್ಪ ನಾಗರಾಜ್ ಸತ್ಯಮೂರ್ತಿ ಗೌರೀಪುರ ರವಿಕುಮಾರ್ ಮಾಳಮ್ಮನಹಳ್ಳಿ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
