ಎಂ ಎನ್ ಕೋಟೆ
ಗುಬ್ಬಿ ತಾಲ್ಲೂಕಿನ ಚೇಳೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಕೋಡಿಪಾಳ್ಯ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮೀ ಹಾಗೂ ಅವರ ಪತಿ ಪುಟ್ಟರಾಜು ಅವರ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ದಬ್ಬೆ ಹಾಗೂ ರೋಟಿ ಕೊಡಲಿನಿಂದ ಹಲ್ಲೆ ಮಾಡಿದ ಪರಿಣಾಮ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಮಗುವಿನ ಸಮೀಪ ಇದ್ದ ನಾಯಿಗೆ ಎದುರು ಮನೆಯವರು ನಾಯಿಗೆ ಕಲ್ಲು ಎಸೆಯಲು ಹೋಗಿ ಮಗುವಿಗೆ ಕಲ್ಲು ಬಿದ್ದಾಗ ವಿಜಯಲಕ್ಷ್ಮೀಯವರು ಕೇಳಲು ಹೋದಾಗ ಪರಸ್ಪರ ಇಬ್ಬರ ನಡುವೆ ಗಲಾಟೆ ನಡೆದಾಗ ಪುಟ್ಟರಾಜು ಕಡೆಯವರು ಚೇಳೂರು ಠಾಣೆಗೆ ದೂರು ನೀಡಲಾಗಿತ್ತು.
ದೂರು ನೀಡಿ ಮನೆಗೆ ಬಂದ ತಕ್ಷಣ ಬಾಳಯ್ಯ ಮತ್ತು ಆತನ ಮಕ್ಕಳು ಪುಟ್ಟರಾಜು ಹಾಗೂ ವಿಜಯಲಕ್ಷ್ಮೀಯವರ ಮೇಲೆ ರೋಟಿ ಕೋಲು ಹಾಗೂ ದಬ್ಬೆಯಿಂದ ತಲೆಗೆ ಹಾಗೂ ಮೈ ಕೈಗೆ ತೀವ್ರವಾಗಿ ಹೊಡೆದ ಪರಿಣಾಮ ತೀವ್ರವಾಗಿ ಪೆಟ್ಟು ಬಿದ್ದಿರುವುದರಿಂದ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಚೇಳೂರು ಪೊಲೀಸರು 7 ಜನರ ಮೇಲೆ ಪ್ರಕರಣ ದಾಖಲು ಮಾಡಿರುತ್ತಾರೆ. ಗಂಡ ಹೆಂಡತಿ ಇಬ್ಬರನ್ನು ಕೂಡ ಬಾಳಯ್ಯನವರ ಕಡೆಯವರು ತೀವ್ರವಾಗಿ ಹೊಡೆದಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮೀ ಹಾಗೂ ಅವರ ಪತಿ ವಿರುದ್ಧ ಗಲಾಭೆ ಮಾಡಿದವರು ಕೂಡ ಚೇಳೂರು ಠಾಣೆಯಲ್ಲಿ 9 ಜನರು ವಿರುದ್ದ ಪ್ರಕರಣ ದಾಖಲು ಮಾಡಿರುತ್ತಾರೆ.
ಬಾಳಯ್ಯನವರು ಕೂಡ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಆದರೆ ವಿಜಯಲಕ್ಷ್ಮೀ ಕಡೆಯವರು ನಮ್ಮಗೆ ಅನ್ಯಾಯವಾಗಿದೆ. ಅವರೇ ನಮ್ಮ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿ ನಮ್ಮ ಮೇಲೂ ಪ್ರಕರಣ ದಾಖಲಿಸಿರುವುದು ನಮಗೆ ಅನ್ಯಾಯವಾಗಿದೆ. ಸ್ಥಳೀಯ ಸಾರ್ವಜನಿಕರ ಮಾಹಿತಿ ಪಡೆದು ನಮಗೆ ನ್ಯಾಯವನ್ನು ಕೊಡಬೇಕು ಎಂದು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
