ಡಿಸೆಂಬರ್ 4 ರಂದು ಎಂ.ಪಿ.ರವೀಂದ್ರರವರ ನುಡಿನಮನ ಕಾರ್ಯಕ್ರಮ

ಹರಪನಹಳ್ಳಿ

       ದಿವಂಗತ ಮಾಜಿ ಶಾಸಕ ಎಂ.ಪಿ. ರವೀಂದ್ರರವರ ಶ್ರದ್ದಾಂಜಲಿ ನುಡಿನಮನ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಎಂ.ಪಿ.ರವೀಂದ್ರರ ಸಹೋದರಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

       ಪಟ್ಟಣದ ಹಡಗಲಿ ರಸ್ತೆಯಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಪಟ್ಟಣದ ಎಡಿಬಿ ಕಾಲೇಜು ಆವರಣದಲ್ಲಿ ದಿನಾಂಕ 04-12-2018 ರಂದು ಬೆಳಿಗ್ಗೆ 11.30 ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲು ತಾಲೂಕು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ತೀರ್ಮಾನಿಸಿರುವುದಾಗಿ ಅವರು ತಿಳಿಸಿದರು.

         ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆ ಮಾಡಿ 371 ಜೆ ಕಲಂ ಸೌಲಭ್ಯಕ್ಕೆ ಅನುಕೂಲ ಮಾಡಿಕೊಟ್ಟಿರುವ ಹಾಗೂ ತಾಲೂಕಿನ 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಸ್ತು ಎಂದು ದಿ. ಎಂ.ಪಿ.ರವೀಂದ್ರರವರ ಕನಸು ನನಸಾಗಿಸಲು ಸಹಕರಿಸಿದ ಮಾಜಿ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

         ಸತ್ತೂರು ಮಠದ ಶ್ರೀಗಳು, ತಗ್ಗಿನ ಮಠದ ವರಸದ್ದೋಜಾತ ಶ್ರೀಗಳು ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸುವಂತೆ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.

         ನಮ್ಮ ಕುಟುಂಭದ ಹಿತೈಷಿಗಳಾದ ಶ್ಯಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಅಣ್ಣನವರ ಒಡನಾಡಿಗಳಾಗಿದ್ದ ಶ್ರೀನಗರ ಕಿಟ್ಟಿ, ಮಧು ಬಂಗಾರಪ್ಪ, ಮತ್ತು ಇತರೆ ಸ್ನೇಹಿತರು ಭಾಗಿಯಾಗಲಿದ್ದಾರೆ.

       ಜಿಲ್ಲೆಯಾ ಮಾಜಿ ಹಾಗೂ ಹಾಲಿ ಶಾಸಕರು, ಎಂ.ಪಿ.ರವೀಂದ್ರರ ಒಡನಾಡಿಗಳೂ ಆಗಿರುವ ರಾಜಕಾರಣಿಗಳು, ಸಾಹಿತಿಗಳು, ಸಾಂಸ್ಕತಿಕ ತಂಡಗಳ ರೂವಾರಿಗಳು, ಆತ್ಮೀಯರು ಸ್ನೇಹಿತರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗೀತನಮನ ಜನಾರ್ಧನ್ ಕೆಸರುಗದ್ದೆ ಮತ್ತು ತಂಡದವರು ನೆಡೆಸಿಕೊಡಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

       ಸುದ್ದಿಗೋಷ್ಟಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಚಿಜಪ್ಪ, ಮುಖಂಡರಾದ ಎಂ.ವಿ.ಅಂಜೀನಪ್ಪ, ಬಸವರಾಜಯ್ಯ, ಸಾಬಳ್ಳಿ ಜಂಭಣ್ಣ, ಡಿ.ರೆಹಮಾನ್, ವೆಂಕಟೇಶ್ ವಕೀಲರು, ಇರ್ಫಾನ್ ಮುದುಗಲ್, ಚಿಕ್ಕೇರಿ ಬಸಣ್ಣ, ಲಾಠಿದಾದಾ, ನೀಲಗುಂದ ವಾಗೀಶ್, ರಾಯದುರ್ಗದ ವಾಗೀಶ್, ಎಲ್.ಮಂಜ್ಯಾನಾಯ್ಯ್, ಜಾಕೀರ್ ಸರ್ಕಾವಸ್, ಅರುಣ್ ಪೂಜಾರ್, ಇರ್ಫಾನ್ ಹಾಗೂ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link