ಪ್ರಥಮ ಪಿಯು ಪರೀಕ್ಷೆ ಹಿಂದೂಡಿಕೆಗೆ ವಿರೋಧ

ದಾವಣಗೆರೆ:

        ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯನ್ನು ಹಿಂದೂಡಿರುವ ಪಿಯು ಮಂಡಳಿಯ ಅವೈಜಾನಿಕ ಕ್ರಮ ಖಂಡಿಸಿ, ಎಐಡಿಎಸ್‍ಓ ಕಾರ್ಯಕರ್ತರು ಶನಿವಾರ ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

       ಈ ವೇಳೆ ಮಾತನಾಡಿದ ಎಐಡಿಎಸ್‍ಓ ನಗರ ಘಟಕದ ಅಧ್ಯಕ್ಷೆ ಸೌಮ್ಯ ಮಾತನಾಡಿ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯು ಜನವರಿ 31ರಿಂದಲೇ ನಡೆಸಲು ತೀರ್ಮಾನಿಸಿರುವ ಪಿಯು ಮಂಡಳಿ ನಿರ್ಧಾರ ಅತ್ಯಂತ ಖಂಡನೀಯವಾಗಿದೆ. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಹ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಬಹುತೇಕ ಕಾಲೇಜುಗಳಲ್ಲಿ ಇನ್ನೂ ಪಠ್ಯ ಬೋಧನೆ ಪೂರ್ಣಗೊಂಡಿಲ್ಲ. ಅಲ್ಲದೆ, ಈ ನಿರ್ಧಾರದಿಂದ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಪರೀಕ್ಷೆಗೆ ತಯಾರಾಗುವುದಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

      ಎಂದಿನಂತೆ ಪ್ರಥಮ ಪಿಯುಸಿ ಕೆಲ ವಿದ್ಯಾರ್ಥಿಗಳು ಜೂನ್‍ನಲ್ಲಿ ಎಸ್‍ಎಸ್‍ಎಲ್‍ಸಿ ಸಪ್ಲಿಮೆಂಟರಿ ಪರೀಕ್ಷೆ ಬರೆದು ಅದೇ ಆಗಸ್ಟ್‍ರಂದು ಪ್ರಥಮ ಪಿಯುಸಿ ಪ್ರವೇಶ ಪಡೆದಿರುತ್ತಾರೆ. ಆ ವಿದ್ಯಾರ್ಥಿಗಳು ಸೇರ್ಪಡೆಯಾದ ಕೇವಲ 5 ತಿಂಗಳ ಅಂತರದಲ್ಲೇ ಪಿಯುಸಿ ವಾರ್ಷಿಕ ಪರೀಕ್ಷೆ ನಿಗದಿಪಡಿಸಿರುವುದು ಸರಿಯಲ್ಲ. ಈ ಹಿಂದಿನ ಪರೀಕ್ಷಾ ದಿನಾಂಕಗಳಂತೆ ಅಂದರೆ ಫೆಬ್ರವರಿ ಮೂರನೇ ವಾರದಂತೆ ಈ ಬಾರಿಯೂ ವಾರ್ಷಿಕ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದರು.

       ಈ ಸಂದರ್ಭದಲ್ಲಿ ಎಐಡಿಎಸ್‍ಓ ಮುಖಂಡರುಗಳಾದ ನಾಗಜ್ಯೋತಿ, ಸ್ಮಿತ, ಸಂಗೀತ, ಸಂತೋಷ್, ಸುಚಿತ್ರ, ರೇಣುಕ, ಪುಶ್ಪ, ಪೂಜಾ, ಶೃತಿ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link