ಮಧುಗಿರಿ
ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ತಂಡ ನೀಡಿದ ಖಚಿತ ಮಾಹಿತಿ ಮೇರೆಗೆ ಆಂಧ್ರ ರಾಜ್ಯದಿಂದ ಕರ್ನಾಟಕದ ಕಸಾಯಿ ಖಾನೆಗಳಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಐದು ವಾಹನಗಳನ್ನು ವಶಕ್ಕೆ ಪಡೆದ ಮಧುಗಿರಿ ಪೊಲೀಸರು 34 ಗೋವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿಯ ಬಸವನಹಳ್ಳಿ ಸಮೀಪದ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ ಬೆಳಗಿನಿಂದ ಸುಮಾರು ವಾಹನಗಳಲ್ಲಿ ಆಂಧ್ರ ಮೂಲದ ಗುಡಿಬಂಡೆ ಸಂತೆಯಿಂದ ಗೌರಿಬಿದನೂರು ತಾಲ್ಲೂಕಿನ ಅಳ್ಳೀಪುರದ ಕಸಾಯಿ ಖಾನೆಗಳಿಗೆ ರವಾನಿಸುತ್ತಿದ್ದ 15 ಹಸುಗಳು 5 ಎಮ್ಮೆ ಹಾಗೂ 14 ಕರುಗಳು ಬೊಲೆರೋ ಸೇರಿದಂತೆ 5 ಟಾಟಾಏಸ್ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡರು.
ನಂತರ ಪಟ್ಟಣದ ಕೋಟೆಯ ಆವರಣದಲ್ಲಿ ಗೋವುಗಳನ್ನು ಕೆಳಗಿಳಿಸಿ ನೀರು ಮತ್ತು ಹುಲ್ಲನ್ನು ನೀಡಿ, ಪಶುಇಲಾಖೆಯ ಡಾ. ದಿವಾಕರ್ರವರಿಂದ ಹಸು ಮತ್ತು ಕರುಗಳನ್ನು ವೈದ್ಯಕೀಯ ತಪಾಸಣೆ ನಡೆಸಿದರು. ಪಿಎಸ್ಐ ವೈ.ವಿ.ರವೀಂದ್ರ ನೇತೃತ್ವದಲ್ಲಿ ಸಿಬ್ಬಂದಿಗಳು ಸಾಲು – ಸಾಲಾಗಿ ಗೋವುಗಳನ್ನು ತುಂಬಿಕೊಂಡು ತರುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸಿ ಹಸು , ಕರುಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡು ಆರೋಪಿ ಚಾಲಕರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/26-Madhugiri-01C.gif)