ಹುಲ್ಕಲ್ಲಮ್ಮ ಬೆಟ್ಟದ ಸಿಸ್ಟನ್ ಬಳಿ ಸ್ವಚ್ಚತೆ ಕಾಪಾಡಿ

ಹುಳಿಯಾರು

         ಹಂದನಕೆರೆ ಹೋಬಳಿ ಹುಲ್ಕಲ್ ಬೆಟ್ಟದ ಸಿಸ್ಟನ್‍ಗಳ ಬಳಿ ಸ್ವಚ್ಚತೆ ಕಾಪಾಡುವಂತೆ ಯರೇಕಟ್ಟೆ ದೇವರಾಜು ಅವರು ಒತ್ತಾಯಿಸಿದ್ದಾರೆ.

          ಹುಲ್ಕಲ್ ಶ್ರೀ ದುರ್ಗಮ್ಮದ ಸನ್ನಿದಾನದ ಬಳಿ ಮೂರ್ನಾಲ್ಕು ಸಿಸ್ಟನ್‍ಗಳಿದ್ದು ಈ ಎಲ್ಲಾ ಸಿಸ್ಟನ್ ಬಳಿಯೂ ಸ್ವಚ್ಚತೆ ಇಲ್ಲದಾಗಿದೆ. ಪರಿಣಾಮ ನೀರು ಕುಡಿಯಲು ಬರುವ ಭಕ್ತರಿಗೆ ದುರ್ವಾಸನೆ, ಸೊಳ್ಳೆಗಳ ಕಿರಿಕಿರಿ ಅನುಭವಿಸುವ ಕರ್ಮ ನಿರ್ಮಾಣವಾಗಿದೆ. ಅಲ್ಲದೆ ದನಕರುಗಳ ನೀರಿಗಾಗಿ ತೊಟ್ಟಿ ಕಟ್ಟಿಸಿದ್ದು ಈ ತೊಟ್ಟಿಗೆ ಸರಿಯಾಗಿ ನೀರು ಬೀಳುವಂತೆ ನಲ್ಲಿ ಹಾಕದ ಪರಿಣಾಮ ಅರ್ಧ ನೀರು ವ್ಯರ್ಥವಾಗಿ ಹರಿಯುವಂತಾಗಿದೆ.

         ಈ ದೇವಸ್ಥಾನದಲ್ಲಿ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಅಲ್ಲದೆ ಪ್ರತಿ ಅಮವಾಸ್ಯೆ, ಪೂರ್ಣಮಿ ಪೂಜೆ ಹಾಗೂ ವರ್ಷಕ್ಕೊಮ್ಮೆ 7 ದಿನಗಳ ಜಾತ್ರೆ ಸಹ ನಡೆಯುತ್ತದೆ. ಹಾಗಾಗಿ ಆ ದಿನಗಳಲ್ಲಿ ಬರುವ ಭಕ್ತರಿಗೆರೀ ಸಿಸ್ಟನ್ ನೀರು ಆಸರೆಯಾಗಿದೆ. ಆದರೆ ಸಿಸ್ಟನ್ ಬಳಿಯೇ ಅನೈರ್ಮತೆಯಿದ್ದು ಟ್ಯಾಂಕ್ ಒಳಗೆ ಇನ್ನೆಷ್ಟು ಗಲೀಜಿದೆಯೋ ಎಂದು ನೀರು ಕುಡಿಯಲು ಭಯ ಪಡುವಂತ್ತಾಗಿದೆ.

          ಗ್ರಾಪಂ ಅಧ್ಯಕ್ಷರು ಹಾಗೂ ಈ ಭಾಗದ ಸದಸ್ಯರು ದೇವಸ್ತಾನಕ್ಕೆ ಬಂದೋಗುತ್ತಾರಾದರೂ ಅನೈರ್ಮಲ್ಯವನ್ನು ಕಂಡುಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಾರೆ. ಮಾಜಿ ಅಧ್ಯಕ್ಷರು ದೇವಸ್ಥಾನದ ಕಮಿಟಿಯಲ್ಲಿದ್ದರೂ ಸ್ವಚ್ಚತೆಯ ಬಗ್ಗೆ ಕ್ರಮ ಕೈಗೊಂಡಿಲ್ಲ. ಹಾಗಾಗಿ ಭಕ್ತರ ಆರೋಗ್ಯದ ದೃಷ್ಠಿಯಿಂದ ತಕ್ಷಣ ಸಿಸ್ಟನ್ ಬಳಿ ಸ್ವಚ್ಚತೆ ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link