ಅರ್ಧಿಂಗ್ ಸಮಸ್ಯೆ ರೈತರಿಗೆ ಪರಿಪೂರ್ಣ ವಿದ್ಯುತ್ ಸಂಪರ್ಕ ಒದಗಿಸಲು ತೊಂದರೆ .

ಮಿಡಗೇಶಿ:

           ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಎಲ್ಲಾ ರೈತಾಪಿವರ್ಗದವರು ತಮ್ಮ ಹೊಲಗದ್ದೆಗಳಲ್ಲಿನ ತೆರೆದ ಬಾವಿಗಳ ಕೊಳಾಯಿ (ಬೋರ್ವೆಲ್)ಗಳಿಂದ ಬರುವಂತಹ ನೀರನ್ನು ಬಳಸಿಕೊಂಡು ಉತ್ತಮ ರೀತಿಯ, ವಿವಿಧ ರೀತಿಯ ಬೆಳೆಗಳನ್ನು ಬೆಳೆದು ತಮ್ಮ ಸಂಸಾರಗಳನ್ನು ನಡೆಸಿಕೊಳ್ಳುವುದರೊಂದಿಗೆ ರಾಜ್ಯದ ಎಲ್ಲಾ ಜನಾದವರಿಗಾಗುವಷ್ಠು ಬೆಳೆಗಳನ್ನು ಬೆಳೆದ ಫಸಲನ್ನು ಮಾರು ಕಟ್ಟೆಗಳಲ್ಲಿ ಮಾರಾಟ ಮಾಡಿಕೊಂಡು ಜೀವನ ಸಾಗಿಸಲು ಅನುಕೂಲಕರವಾಗಲೆಂಬ ಸದುದ್ದೇಶದಿಂದ ನಿಗಧಿತ ಸ್ಥಳಗಳಲ್ಲಿ ವಿದ್ಯುತ್ ಉಪಸ್ಥಾವರಗಳನ್ನು ಸ್ಥಾಪಿಸುತ್ತಿರುವುದು ಶ್ಲಾಘನೀಯ.

           ಉಪಸ್ಥಾವರಗಳನ್ನು ಸ್ಥಾಪಿಸುವಾಗ ಗುತ್ತಿಗೆದಾರರಿಗೆ ಇದರ ಪೂರ್ಣ ಜವಾಬ್ದಾರಿಯನ್ನು ಸಹ ಒಪ್ಪಿಸಿರುತ್ತಾರೆ. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ .ವಿದ್ಯುತ್ ಉಪಸ್ಥಾವರಗಳನ್ನು ನಿರ್ಮಿಸುವ ಸ್ಥಳ ಕಲ್ಲು ಬಂಡೆಗಳ ಜಾಗವಾಗದೆ ಉತ್ತಮ ಭೂಮಿಯಾಗಿರಬೇಕು ಈ ಸ್ಥಳದಲ್ಲಿ ನೀರಿನ ವ್ಯವಸ್ಥೆ ಉತ್ತಮವಗಿರಬೇಕಾಗಿರುತ್ತದೆ. ಉತ್ತಮ ನೀರು ಇದ್ದಲ್ಲಿ ಉಪಸ್ಥಾವರಕ್ಕೆ ಬೇಕಾಗುವ ಅರ್ಥಿಂಗ್ (ಗ್ರೌಂಡಿಂಗ್)ಗಾಗಿನೀರಿನ ಸೌಲಭ್ಯ ಅತಿಮುಖ್ಯವಾಗಿರುತ್ತದೆ.

           ಮಧುಗಿರಿ ತಾಲ್ಲೂಕಿನ ಮಿಡಿಗೇಶಿ (ಮಧುಗಿರಿ ಟು ಪಾವಗಡ ಕೆ.ಶಿಫ್ ರಾಜ್ಯ ಹೆದ್ದಾರಿ ರಸ್ತೆ ಪಕ್ಕ ) 2002 ರಲ್ಲಿ ವಿದ್ಯುತ್ ಉಪಸ್ಥಾವರ 66/11 ಕೆ ವಿ (ಹನ್ನೆರಡುಪಾಯಿಂಟ ಐದು ಮೆಘಾವ್ಯಾಟ್ ಸಾಮಥ್ರ್ಯ) ಪ್ರಾರಂಭವಾಗಿರುವುದು ಸರಿಯಷ್ಠೇ ಆಗ ಸದರಿ ಜಾಗದಲ್ಲಿ ಒಂದು ಕೊಳವೆ ಬಾವಿಯನ್ನು ಕೊರೆಸಿದ್ದು ಸದರಿ ಕೊಳವೆ ಬಾವಿಯಲ್ಲಿ ಒಂದು ದಿನಕ್ಕೆ ಐದರಿಂದ ಹತ್ತು ನಿಮಿಷಗಳು ಮಾತ್ರ ನೀರುಬರುತ್ತದೆ.

           ಈ ನೀರು ಇಲ್ಲಿನ ಉಪಸ್ಥಾವರಕ್ಕೆ ಸಾಕಾಗುತ್ತಿಲ್ಲ ಹಾಗೂ ಉಪಸ್ಥಾವರವನ್ನು ಹುಟ್ಟು ಬಂಡೆಯ ಮೇಲೆ ನಿರ್ಮಿಸಲಾಗಿರುತ್ತದೆ. ಆದ್ದರಿಂದ ಅತಿ ಹೆಚ್ಚಿನ ನೀರಿನ ಅತ್ಯವಶ್ಯಕತೆಯಿರುತ್ತದೆ. ಇಲ್ಲದೆ ಹೊದಲ್ಲಿ ಗ್ರೌಂಡ್‍ಗಳಾಗುವುದು ಖಚಿತವಾಗಿರುತ್ತದೆ. ಕಳೆದ ಹದಿನಾರು ವಷಗಳಿಂದಲೂ ಸಮಂಜಸ ಅರ್ಥಿಂಗ್‍ನ ವ್ಯವಸ್ಥೆಯಲ್ಲದೆಯ ಉಪಸ್ಥಾವರದ ಗುತ್ತಿಗೆದಾರರು ಗೊತ್ತಿದ್ದು ಗೊತ್ತಿಲ್ಲದವರಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

          ಈ ಇಲಾಖೆಯಲ್ಲಿ ಎಂಟು ಜನ ಹೊರ ಗುತ್ತಿಗೆದಾರರು ಕೆಲಸ ನಿರ್ವಹಿಸಿತ್ತಿರುತ್ತಾರೆ ಅದರಲ್ಲಿ ಮೂರು ಜನ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇವರಿಗೇನಾದರು ಶೌಚದ ಅವಶ್ಯಕತೆ ಬೇಕಾದಲ್ಲಿ ನೀರಿನ ಕೊರತೆ, ಕುಡಿಯುವ ನೀರಿನ ಅಭಾವ, ಓರ್ವ ಅಸಿಸ್ಟೆಂಟ್ ಇಂಜಿನಿಯರ್ ಸಹ ಕೆಲಸ ನಿರ್ವಹಿಸುತ್ತಿರುತ್ತಾರೆ. ಸದರಿ 66/11 ಕೆ.ವಿ. ಉಪಸ್ಥಾವರ ಬೇಡತ್ತೂರು ಗ್ರಾಮದ ಬಳಿ ಸ್ಥಾಪನೆಯಾಗಬೇಕಿತ್ತೆಂದು ತಿಳಿದುಬಂದಿದೆ. ಈ ವ್ಯಾಪಿಗೆ 33 ಗ್ರಾಮಗಳು ಸೇರ್ಪಡೆಯಾಗುತ್ತವೆ. ಒಂದು ಪೀಡರ್ ಹೈಪಿಸೆಟ್ ವ್ಯಾಪ್ತಿಗೆ ಎಂಟರಿಂದ ಒಂಭತ್ತು ಗ್ರಾಮಗಳು ಒಳಪಡುತ್ತವೆ.

          ಆರ್. ಆರ್. ನಂಬರಿನ 5200 ಮನೆಗಳು ಬರುತ್ತವೆ ಸರ್ಕಾರದ ನೂತನ ಸುತ್ತೂಲೆ ಪ್ರಕಾರ ರೈತರಿಗೆ ಪ್ರತಿದಿನ ಬೆಳಗ್ಗೆ ಸಮಯ ಏಳು ಗಂಟೆಗಳ ಕಾಲ ವಿದ್ಯುತ್ ಒದಗಿಸಲೇಬೇಕಾಗಿರುತ್ತದೆ. ಕೆ.ಪಿ.ಟಿ.ಸಿ.ಎಲ್. ಇಲಾಖೆ, ವಿದ್ಯುತ್ ಉಪಸ್ಥಾವರದಲ್ಲಿ ಸರಿಯಾದ ಅರ್ಥಿಂಗ್ ವ್ಯವಸ್ಥೆಯಿಲ್ಲದ ಕಾರಣದಿಂದ ವಿದ್ಯುತ್‍ನ್ನು ಒದಗಿಸುವುದು ಕಷ್ಠಕರವಾದ ಕೆಲಸವಾಗಿರುತ್ತದೆ. ಇದರಿಂದ ರೈತರಿಗೆ ಒದಗಿಸಬೇಕಾದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಾಸ ಖಚಿತ ಇದರಿಂದ ರೈತರಿಗೆ ತೊಂದರೆ, ಇದೆ ಮಿಡಿಗೇಶಿ ಹೋಬಳಿಯಲ್ಲಿ ಇತ್ತೀಚೆಗೆ ಪ್ರಾರಂಭವಾಗಿರುವ ಹೀರೋ ಸೋಲಾರ್ ಕಂಪನಿಯಿಂದ ಇಪ್ಪತ್ತು ಮೆಘಾವ್ಯಾಟ್ ವಿದ್ಯುತ್ ಸಂಪರ್ಕ ಇಲ್ಲಿಗೆ ಅಳವಡಿಸಿಕೊಂಡಿದ್ದು ಇದರಿಂದ ರೈತರಿಗೆ ದಿನವೊಂದಕ್ಕೆ ಏಳು ಗಂಟೆಎಗಳ ವಿದ್ಯುತನ್ನು ಪೂರೈಸುವುದರ ಜೊತೆಗೆ ದಿನದ ಇಪ್ಪತ್ನಾಲ್ಕು ಗಂಟೆ ಲೈಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಮಿಡಿಗೇಶಿ ಕೆ.ಪಿ.ಟಿ.ಸಿ.ಎಲ್. ಇಲಾಖೆ ವ್ಯಾಪ್ತಿಗೆ 576 ಟಿ.ಸಿ ಗಳು ಕಾರ್ಯನಿರ್ವಹಿಸುತ್ತವೆ.

         ಆದ್ದರಿಂದ ಇದಕ್ಕೆ ಸಂಭಂಧಿಸಿದ ಕೆ.ಪಿ.ಟಿ.ಸಿ.ಎಲ್. ಇಲಾಖೆಯ ಮೇಲಾಧಿಕಾರಿಗಳವರು ಅತಿ ಶಿಘ್ರದಲ್ಲಿ ಆರ್ಥಿಂಗ್ ವ್ಯವಸ್ಥೆ ಕಲ್ಪಿಸಲು ಮುಂದಾಗುವರೇ? ಒಂದು ವಿದ್ಯುತ್ ಉಪಸ್ಥಾವರದ ಅಂದಾಜು ಮೊತ್ತ (ಬೆಲೆ) 3.50 ಕೋಟಿ ರೂಗಳಾಗಿರುತ್ತದೆ. ಅರ್ಥಿಂಗ್ ವ್ಯವಸ್ಥೆ ಸರಿಯಿಲ್ಲದೆ ಹೊದಲ್ಲಿ ಕೆಡುವುದು ಗ್ಯಾರೆಂಟಿ ಎನ್ನುತ್ತಾರೆ ಇಲಾಖಾಧಿಕಾರಿಗಳವರು. ಇದೇ ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸೇರಿದ ಬ್ರಹ್ಮದೇವರ ಹಳ್ಳಿ ಕಾವಲ್‍ನ ಬಗರ್ ಹುಕುಂ ಭೂಮಿಯಲ್ಲಿ ತಾಲ್ಲೂಕಿನಲ್ಲಿ ತಹಶಿಲ್ದಾರರು 10.30 ಎಕರೆ ಭೂಮಿಯ ಮುಂಜೂರಾತಿಯಾದಲ್ಲಿ ಅತಿ ಜರೂರಾಗಿ ಸುಮಾರು 18 ಕೋಟಿರೂಗಳ ವೆಚ್ಚದ ವಿದ್ಯುತ್ ಉಪಸ್ಥಾವರ 66/11 ಕೆ.ವಿ. (12.5 ಮೆಘಾವ್ಯಾಟ್ ಸಾಮರ್ಥ) ಸ್ಥಾವರ ಸ್ಥಪನೆಯಾಗಲಿದೆ ಎಂಬುದಾಗಿ ಇಲಾಖಾಧಿಕಾರಿಗಳಿಂದ ತಿಳಿದು ಬಂದಿದೆ. ಈಗಾಗಲೆ ಕೆ.ಪಿ.ಟಿ.ಸಿ.ಎಲ್. ಇಲಾಖೆಯ ಬೊಡ್ರ್ನಲ್ಲಿ ಅನುಮೋದನೆಯೊಂದು ಬಾಕಿಯಿರುತ್ತದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link