ರೈತರಿಗೆ ಇಂದು ಆತ್ಮಸ್ಥೈರ್ಯವನ್ನು ತುಂಬೇಕಾಗಿದೆ : ಬಿ.ಸಿನಾಗೇಶ್

ತಿಪಟೂರು :

         ಒಂದು ಕಾಲದಲ್ಲಿ ರೈತರು ದೇಶದ ಬೆನ್ನಲುಬಾಗಿದ್ದರು ಆದರೆ ನಾವಿಂದು ಆ ಬೆನ್ನೆಲುಬಿಗೆ ಆತ್ಮಸ್ಥೈರ್ಯವನ್ನು ತುಂಬಬೇಕಾಗಿ ಬಂದಿದೆ ಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.

        ನಗರದ ಕಲ್ಪತರು ಆಡಿಟೋರಿಯಂನಲ್ಲಿ ಇಂದು ಕೃಷಿ ಇಲಾಖೆ, ತಾಲ್ಲೂಕು ಕೃಷಿಕ ಸಮಾಜ ಮತ್ತು ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೊನೇಹಳ್ಳಿ ಇವರುಗಳ ಸಂಯುಕ್ತಾಶ್ರಯಲ್ಲಿ ಆಯೋಜಿಸದ್ದ ರೈತರ ದಿನಾಚರಣೆ ಹಾಗೂ ರೈತರ ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಪಂಚದಲ್ಲಿ ಕೃಷಿಯನ್ನು ವೇದ ಎಂದು ಪರಿಗಣಿಸಿರುವುದು ಭಾರತ ಆದರೆ ಇಂದು ಕೃಷಿಯಲ್ಲಿ ಹೆಚ್ಚಿನ ಇಳುವರಿಗಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಮಣ್ಣನ್ನು ಹಾಳುಮಾಡಿದ್ದಾಡಿ ಬರಡು ಭೂಮಿಯನ್ನಾಗಿ ಮಾಡಿದ್ದಾರೆ.

         ಕೃಷಿಯು ರೈತನಿಗೆ ಖುಷಿನ್ನು ತರಬೇಕೆ ಹೊರತು ದುಖಃವನ್ನು ಉಂಟುಮಾಡಬಾರದು, ಇಂದು ರೈತನು ತನ್ನ ವೃತ್ತಿಯನ್ನು ಮಗ ಮಾಡಬೇಕೆನ್ನುವ ಆಸೆಯನ್ನು ಬಿಟ್ಟು ಸರ್ಕಾರಿ ಕೆಲಸದ ಕಡೆ ಮುಖಮಾಡಿದ್ದಾನೆ. ಸುಮಾರು 30 ವರ್ಷಗಳ ಹಿಂದೆ ಸರ್ಕಾರ ಮಾಡಬೇಕಿದ್ದ ಕೆಲಸಗಳಾದ ಕೆರೆ, ಕಟ್ಟೆಗಳನ್ನು ನಿರ್ಮಿಸುವ ಕೆಲಸವನ್ನು ರೈತರೇ ಮಾಡುತ್ತಿದ್ದು ಆದರೆ ಇಂದಿನ ಸರ್ಕಾರದ ಭಾಗ್ಯಗಳು ಅವರನ್ನು ದಾರಿತಪ್ಪಿಸುತ್ತಿವೆ. ರೈತರಿಗೆ ಆತ್ಮಸ್ಥೈರ್ಯವನ್ನು ತುಂಬುವಂತಹ ಕೆಲಸವನ್ನು ಸರ್ಕಾರಗಳು ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಮಂಡ್ಯದ ಯುವಕ ರೈತರಿಗೆ ಆಗ್ರ್ಯಾನಿಕ್ ಕೃಷಿಯಲ್ಲಿ ಸಾಧಿಸಿ ಇಡೀ ದೇಶಕ್ಕೆ ಮಾದರಿಯಾಗಿ ರೈತರನ್ನು ಉದ್ದರಿಸುವ ಕೆಲಸವನ್ನು ಮಾಡುತ್ತ ಬರುತ್ತಿದ್ದಾನೆ ಇಂದು ಇದು ಒಂದು ಎಂ.ಎನ್.ಸಿ. ಕಂಪನಿಯಂತೆ ಬೆಳೆದು 3 ತಿಂಗಳು ಮೊದಲೇ ಉತ್ಪನ್ನಗಳನ್ನು ಖರೀದಿಸಲು ಜನರು ಮುಗಿಬೀಳುತ್ತಿದ್ದಾರೆ ಎಂದು ತಿಳಿಸಿದರು.

          ಕೊನೇಹಳ್ಳಿಯ ಐ.ಸಿ.ಎ.ಆರ್ ಕೃಷಿ ವಿಜ್ಞಾನಿ ಶ್ರೀನಿವಾಸ್ ಮಾತನಾಡಿ ನಾವಿಂದು ಭೂಮಿಯಲ್ಲಿ ಬೆಳೆಬೆಳೆಯುವ ಮೊದಲು ಆ ಮಣ್ಣಿನ ಪರೀಕ್ಷೆಯನ್ನು ಮಾಡಿ ಅದರಲ್ಲಿರುವ ಪೋಷಕಾಂಶಗಳನ್ನು ಆದರಿಸಿ ಈ ಮಣ್ಣಿನಲ್ಲಿ ಯಾವ ಬೆಳೆಬೆಳೆದರೆ ಸೂಕ್ತ ಎಂದು ತಿಳಿದು ಕೃಷಿಯನ್ನುಮಾಡಬೇಕೆ ಹೊರತು ಪಕ್ಕದವರು ಬೆಳೆಯುತ್ತಿದ್ದಾರೆಂದು ಬೆಳೆದರೆ ಕೃಷಿಯಲ್ಲಿ ಕೈಸುಟ್ಟುಕೊಳ್ಳಬೇಕಾಗುತ್ತದೆ ಆದ್ದರಿಂದ ಮಣ್ಣನ್ನು ಪರೀಕ್ಷಿಸಿ ಯಾವ ಪೋಷಕಾಂಶಗಳನ್ನು ಹಾಕಬೇಕೆದು ತಿಳಿದು ಉತ್ತಮ ಬೆಳೆಗಳನ್ನು ಬೆಳೆಯುವುದು ಸೂಕ್ತವೆಂದು ತಿಳಿಸಿದರು.

         ಕೃಷಿ ಅಧಿಕಾರಿ ಜಯಪ್ಪ ಮಾತನಾಡಿ ಇಂದು ಮಾಜಿ ಪ್ರಧಾನಿ ದಿವಂಗತ ಚೌದರಿ ಚರಣ್‍ಸಿಂಗ್‍ರವರು ರೈತರಿಗಾಗಿ ಮಾಡಿದ ಜಮೀನ್ದಾರಿ ಪದ್ಧತಿ ನಿರ್ಮೂಲನೆ, ಹಸಿರುಕ್ರಾಂತಿ, ಎ.ಪಿಎಂ.ಸಿ ಕಾಯಿದೆಗಳು ಇಂದು ರೈತರಿಗೆ ಸಹಕಾರಿಯಾಗಿದ್ದು ಇವರ ನೆನಪಿಗೋಸ್ಕರ ಅವರ ಜನ್ಮದಿನವನ್ನು ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

          ಕೃಷಿಕರೊಂದಿಗೆ ಸಂವಾದ ನಡೆಸಿದ ಪಶುವೈದ್ಯ ಭಾನುಪ್ರಕಾಶ್ ರೈತರ ಸಮಸ್ಯೆಗಳಿಗೆ ಉತ್ತರಿಸಿದರು ಇದರಲ್ಲಿ ಮುಖ್ಯವಾಗಿ ರಾಸುಗಳಿಗೆ ಬರು ಕಾಲುಬಾಯಿರೋಗ ಮತ್ತು ಹಾಲ್ಕುರಿಕೆ ಪಶು ವೈದ್ಯರ ಬಗ್ಗೆ ಪ್ರಶ್ನೆಗಳು ಹೆಚ್ಚಿದ್ದವು.

       ಪ್ರಗತಿಪರ ಕೃಷಿಕರಾದ ಉಮಾಪತಿ, ಸುಗುಣೇಂದ್ರ ಪಾಟೀಲ್, ಕರಿಯಪ್ಪ, ಶೇಖರ್, ಚನ್ನಬಸವಯ್ಯನವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯರಾದ ಎ.ಆರ್.ಪುಟ್ಟಸ್ವಾಮಿ ಮೀನಾಕ್ಷಿಪರಪ್ಪ, ತಾ.ಪಂ ಈ.ಓ ಎಸ್.ಕೆ.ಷಡಕ್ಷರಿ, ತಹಸೀಲ್ದಾರ್ ಡಾ.ವಿ.ಮಂಜುನಾಥ್, ಎ.ಪಿ.ಎಂ.ಸಿ ಸದಸ್ಯ ಮಧು ಮತ್ತಿತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link