ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡುವ ಅನಂತಕುಮಾರ್ ಹೆಗಡೆ ಪತ್ನಿ ಯಾವ ಧರ್ವಕ್ಕೆ ಸೇರಿದವರು? ಯಾವ ಜಾತಿಗೆ ಸೇರಿದವರು ಎನ್ನುವುದರ ಬಗ್ಗೆ ಡಿಎನ್ಎ ಪರೀಕ್ಷೆ ನಡೆಸಲಿ ಎಂದು ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕುಟುಕಿದ್ದಾರೆ.
‘ನೀವಷ್ಟೇ ಹಿಂದುಗಳು ಎಂದು ಭಾವಿಸಿದ್ದೀರಾ. ನಾವೂ ಹಿಂದುಗಳೇ. ಮಹಿಳೆಯರಿಗೆ ಅವಮಾನ ಮಾಡಿದವರ, ಬ್ಲೂ ಫಿಲ್ಮ್ ನೋಡಿದವರ, ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದವರ ಎಷ್ಟು ಮಂದಿ ಕೈ ಕತ್ತರಿಸಿದ್ದೀರಿ?’ ಎಂದು ಹೆಗಡೆಯವರ ನೀಡಿದ ಹೇಳಿಕೆಗೆ ಟಾಂಗ್ ನೀಡಿದ್ದಲ್ಲದೇ ಪ್ರಧಾನಿ ಮೋದಿಯವರು ರಾಮ ಮಂದಿರವನ್ನು ಕಟ್ಟಿ ಬಿಡುತ್ತೇವೆ ಎಂದು ಮಾಡಿದ ಪ್ರತಿಜ್ಞೆ ಬರಿಯ ಸುಳ್ಳು ಎಂದು ಟೀಕಿಸಿದ್ದಾರೆ.
ಮೋದಿ ನುಡಿದಂತೆ ನಡೆಯುವವರೆ ಆದರೆ ಇದುವರೆಗೂ ರಾಮ ಮಂದಿರ ಏಕೆ ನಿರ್ಮಿಸಿಲ್ಲ? ಹಾಗಿದ್ದರೆ ಮೋದಿಯವರನ್ನು ಕೊಂದು ಬಿಡುತ್ತೀರಾ..?’ ಎಂದು ಹಿಂದೂ ಮಹಾಸಭಾ ಹಾಗೂ RSSಗೆ ಗೋಪಾಲಕೃಷ್ಣ ಸವಾಲು ಹಾಕಿದರು. ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಬೇಳೂರು: ‘ಕೇಂದ್ರ ಸಚಿವರಾಗಿ ಕೈ ಕಡಿಯುವ ಮಾತನಾಡುತ್ತಾರೆ. ಮಹಿಳೆಯರ ವಿರುದ್ಧದ ಕಾರ್ಯಗಳಲ್ಲಿ ತೊಡಗುವವರು ವಿರುದ್ಧ ಯಾವ ಕ್ರಮವೂ ಕೈಗೊಂಡಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಇಂಥ ಮಾತುಗಳನ್ನು ಆಡಬಾರದು…’ ಎನ್ನುವ ಮೂಲಕ ಗೋಪಾಲಕೃಷ್ಣ ತಮ್ಮ ಹೇಳಿಕೆಯನ್ನು ಪ್ರತಿಭಟನೆ ನಂತರವೂ ಸಮರ್ಥಿಸಿಕೊಂಡಿದ್ದಾರೆ .‘ಬೇರೆ ಜಾತಿ ಧರ್ಮದವರನ್ನು ಮದುವೆಯಾಗಬಾರದೆಂಬ ಕಾನೂನು ಇದೆಯೇ? ಇಂದು ಹೆಗಡೆಯವರಿಗೆ ಸವಾಲೆಸಿದ್ದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/02/file6zidam836kmtfm68oud.gif)