ನಾಳೆಯಿಂದ ರಾಜ್ಯಾದ್ಯಂತ ರಿಕ್ಷಾ, ಬಸ್, ರೈಲು​ ಸಂಚಾರ!!

ಬೆಂಗಳೂರು:

      ನಾಳೆಯಿಂದ ರಾಜ್ಯಾದ್ಯಂತ ರಿಕ್ಷಾ, ಬಸ್​, ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಬಿ.ಎಸ್​ ಯಡಿಯೂರಪ್ಪ ತಿಳಿಸಿದ್ದಾರೆ.

      ನಿನ್ನೆ ತಾನೆ ಲಾಕ್​ಡೌನ್ 4.0ಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ಕ್ಯಾಬಿನೇಟ್​ ಸಚಿವರೊಂದಿಗೆ ಚರ್ಚೆ ನಡೆಸಿದ ಸಿಎಂ ಬಿ.ಎಸ್​ ಯಡಿಯೂರಪ್ಪ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಮುಂದಿನ ಹಂತದ ಲಾಕ್ ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ತಿಳಿಸಿದ್ದಾರೆ.

ಸಿಎಂ ತೆಗೆದುಕೊಂಡು ನಿರ್ಧಾರಗಳು ಹೀಗಿವೆ:

  • ಮೇ 31 ವರೆಗೆ ಲಾಕ್‌ಡೌನ್ ಮುಂದುವರಿಕೆ

  • ಜನರ ಓಡಾಟಕ್ಕಾಗಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಸೇರಿದಂತೆ ಎಲ್ಲ ಬಸ್​​ಗಳ ಓಡಾಟಕ್ಕೆ ಅನುಮತಿ
    ಒಂದು ಬಸ್​ನಲ್ಲಿ ಕೇವಲ 30 ಜನರಿಗೆ ಪ್ರಯಾಣ ಮಾಡುವ ಅವಕಾಶ. ಮಾಸ್ಕ್​ ಕಡ್ಡಾಯ.
    ಮಾಸ್ಕ್​ ಹಾಕದೇ ಇದ್ದರೆ ದಂಡ ವಿಧಿಸಲು ನಿರ್ಧಾರ.
  • ಕಂಟೈನ್​ಮೆಂಟ್​​ ಝೋನ್​ನಲ್ಲಿ ಬಿಗಿ ಭದ್ರತೆ. ಕಾನೂನು ಮೀರಿದರೆ ಕ್ರಿಮಿನಲ್​ ಮೊಕದ್ದಮೆ
  • ಬಸ್​​ ಚಾರ್ಜ್ ​​ಅನ್ನು ಸದ್ಯಕ್ಕೆ ಹೆಚ್ಚಿಸೋದಿಲ್ಲ.. ಈಗ ಆಗಿರುವ ನಷ್ಟವನ್ನ ಸರ್ಕಾರವೇ ತುಂಬಿಕೊಡುತ್ತೆ
  • ಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್​​ ಮಾಡುವ ತೀರ್ಮಾನ ಮುಂದುವರಿಕೆ
    ಬೇರೆ ರಾಜ್ಯದಿಂದ ಅನಾವಶ್ಯಕವಾಗಿ ಬರಲು ಅವಕಾಶವಿಲ್ಲ
  • ಆಟೋ, ಟ್ಯಾಕ್ಸಿ ಓಡಾಟಕ್ಕೆ ಅನುಮತಿ, ಅವರಿಗೂ ಮಾಸ್ಕ್​ ಕಡ್ಡಾಯ
  • ನಾಳೆಯಿಂದ ಮಾಲ್​​, ಸಿನಿಮಾ ಥಿಯೇಟರ್, ಹೋಟೆಲ್​ ಬಿಟ್ಟು ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ
  • ನಮ್ಮ ರಾಜ್ಯದಲ್ಲಿ ಓಡಾಡಲು ಟ್ರೇನ್​ಗಳಿಗೆ ಅವಕಾಶ .ಹೊರಗಡೆಯಿಂದ ಬರುವ ಟ್ರೇನ್​ಗಳಿಗೆ ಅವಕಾಶ ನೀಡಲ್ಲ
  • ಸಲೂನ್​ ಶಾಪ್​ ತೆರೆಯಲು ಅನುಮತಿ
  • ಭಾನುವಾರ ಮಾತ್ರ ಕಂಪ್ಲೀಟ್​ ಲಾಕ್​ಡೌನ್​ ಇರುತ್ತೆ, ಜನರ ಓಡಾಟಕ್ಕೂ ಅವಕಾಶ ಇರಲ್ಲ
  • ಪಾರ್ಕ್​ಗಳಲ್ಲಿ ಬೆಳಗ್ಗೆ 7 ರಿಂದ 9 ಹಾಗೂ ಸಾಯಂಕಾರ 5 ರಿಂದ 7ಗಂಟೆ ವರೆಗೆ ಎಲ್ಲ ಪಾರ್ಕ್​ಗಳಲ್ಲಿ ಓಡಾಟ ಮಾಡಲು ಅವಕಾಶ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap