ಈ ಬಾರಿ ದೇವೇಗೌಡರ ಕ್ಷೇತ್ರ ಅಚ್ಚರಿ ಫಲಿತಾಂಶಕ್ಕೆ ಸಾಕ್ಷಿಯಾಗಲಿದೆ : ಎಸ್​.ಎಂ. ಕೃಷ್ಣ

ಹಾಸನ : 
   ಬಿಜೆಪಿ ಸೇರ್ಪಡೆಯಾದಾಗಿನಿಂದ ಯಾವುದೇ ಪ್ರಚಾರ ಸಭೆಯಲ್ಲಿ ಕಾಣಿಸಿಕೊಳ್ಳದ ಎಸ್​.ಎಂ. ಕೃಷ್ಣ ಇದೇ ಮೊದಲ ಬಾರಿ ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದಾರೆ.    ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಪ್ರಚಾರ ನಡೆಸಲು ಬಿಜೆಪಿ ನಾಯಕ ಎಸ್​.ಎಂ. ಕೃಷ್ಣ ಮುಂದಾಗಿದ್ದಾರೆ.

   ಒಕ್ಕಲಿಗ ಸಮುದಾಯದ ಪ್ರಬಲ ಮುಖಂಡರಾಗಿರುವ ಕೃಷ್ಣ ಆಗಮನದಿಂದ ಕ್ಷೇತ್ರದಲ್ಲಿ ಗೌಡ ಮತಗಳ ಮೇಲೆ ಪ್ರಭಾವ ಬೀರಲಿದೆ. ಈ ಮೂಲಕ ಒಕ್ಕಲಿಗ ಸಮುದಾಯದ ಜೆಡಿಎಸ್ ಮತ  ಸೆಳೆಯಲು ಸಾಧ್ಯ ಎಂಬ ಲೆಕ್ಕಾಚಾರವನ್ನು ಬಿಜೆಪಿ ನಡೆಸಿದೆ.  ಬೇಲೂರು ತಾಲೂಕಿನ ಗ್ರಾಮಗಳಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ.

   ಎಸ್​ ಎಂ ಕೃಷ್ಣ ಜೊತೆಯಲ್ಲಿ ಮಾಜಿ ಡಿಸಿಎಂ ಆರ್​ ಅಶೋಕ್​ ಕೂಡ ಇಂದು ಪ್ರಚಾರ ನಡೆಸಲಿದ್ದಾರೆ. ಹಾಸನಕ್ಕೆ ಬಂದಿಳಿದ ಅವರ ಈ ಬಾರಿ ದೇವೇಗೌಡರ ಕ್ಷೇತ್ರ  ಅಚ್ಚರಿ ಫಲಿತಾಂಶಕ್ಕೆ ಹಾಗೂ  ಮೋದಿ ಮತ್ತೆ ಪ್ರಧಾನಿ ಆಗುವ ವಾತಾವರಣವಿದೆ. ಇದೇ ಉತ್ಸಾಹ ಬಿಜೆಪಿ ಕಾರ್ಯಕರ್ತರಲ್ಲಿ  ಕಂಡುಬರುತ್ತಿದೆ ಎಂದರು.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  
   

Recent Articles

spot_img

Related Stories

Share via
Copy link
Powered by Social Snap