ಬ್ಯಾಲ್ಯ :
ಜೂನ್ 15ರ ರಾತ್ರಿ ಎಂಟರ ಸಮಯದಲ್ಲಿ ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮದಿಂದ ಸುಮಾರು ಐದು ಕಿ.ಮೀ ದೂರ ಪಶ್ಚಿಮ ದಿಕ್ಕಿನ ಬೆಟ್ಟ ಸಾಲುಗಳಿಂದ ಎರಡು ಕರಡಿಗಳು, ಅಗ್ರಹಾರ – ಬ್ಯಾಲ್ಯ ಮುಖ್ಯ ರಸ್ತೆ ಮೂಲಕವೆ ಬ್ಯಾಲ್ಯ ಗ್ರಾಮದೊಳಕ್ಕೆ ನುಗ್ಗಿವೆ.
ಕರಡಿಗಳನ್ನು ಕಂಡು ಭಯಭೀತರಾದ ಬ್ಯಾಲ್ಯ ಗ್ರಾಮದ ಜನತೆ ಕೂಗಾಡಿ, ಕಿರುಚಾಡಿ, ಪಟಾಕಿ ಹಚ್ಚಿ ಹೆದರಿಸಿದ್ದಾರೆ. ಗಾಬರಿಗೊಂಡ ಒಂದು ಕರಡಿ ಊರಿನ ಹಳೆ ಕಟ್ಟಡದ ಬಳಿ ಸೇರಿಕೊಂಡಿದೆಯೆಂದೂ, ಮತ್ತೊಂದು ಬೇರೆ ಕಡೆ ಎಲ್ಲೋ ನುಗ್ಗಿದೆಯೆಂದು ಹೇಳಿದ ಯುವಕರು ಪಟಾಕಿಗಳನ್ನು ಹಚ್ಚಿ ಊರಿನಿಂದ ಹೊರಕ್ಕೆ ಹೊರಡಿಸುವ ಯತ್ನ ಮಾಡುತ್ತಿದ್ದಾರೆ.
ಬೆಟ್ಟದ ಕಡೆಗೆ ಓಡಿಸಿದೆವೆಂದು ಕೆಲವರು ಹೇಳುತ್ತಿದ್ದಾರೆ. ಒಟ್ಟಾರೆ ಈ ಘಟನೆಯಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
