ಮಧುಗಿರಿ :
ಪಟ್ಟಣದ ವಿದ್ಯಾನಗರದಲ್ಲಿನ ಬಾಲಕಿಯರ ವಿದ್ಯಾರ್ಥಿ ನಿಲಯದ ಸುತ್ತಾ ಮುತ್ತಾ ಕಳೆದ ಮೂರು ದಿನಗಳಿಂದ ಚಿರತೆಯೊಂದು ಪತ್ಯಕ್ಷವಾಗುತ್ತಿದೆ ಎಂದು ನಾಗರೀಕರು ತಿಳಿಸಿದ್ದಾರೆ.
ಇತ್ತೀಚಿಗೆ ಬಾಲಕಿಯರ ವಿದ್ಯಾರ್ಥಿ ನಿಲಯದ ಸಮೀಪ ಸರಣಿಯಾಗಿ ನಾಯಿ, ಹಂದಿಗಳ ಮರಿಗಳನ್ನು ಚಿರತೆ ಹೊತ್ತೊಯ್ದಿದ್ದು ಬೆಟ್ಟದ ಸಮೀಪವಿರುವ ಮನೆಯ ಮುಂದೆ ಇದ್ದ ಮೇಕೆಯೊಂದು ಚಿರತೆ ದಾಳಿಯಿಂದ ಸಾವನ್ನಪ್ಪಿದೆ. ಬಾಲಕಿಯರ ಹಾಸ್ಟೆಲ್ ಸಮೀಪ ಸರಿಯಾದ ರಸ್ತೆಯಾಗಲಿ, ವಿದ್ಯುತ್ ದೀಪದ ವ್ಯವಸ್ಥೆಯಾಗಲಿ ಇಲ್ಲಾ ಎಂಬುದು ಸ್ಥಳೀಯರ ಆರೋಪವಾಗಿದೆ.
ಚಿರತೆಯ ದಾಳಿಯ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಹಾಸ್ಟೆಲ್ಗೆ ತೆರಳಿ ಬಯೋಮೆಟ್ರಿಕ್ ಹಾಜರಾತಿ ನೀಡಲು ಭಯದ ವಾತಾವರಣದಲ್ಲಿ ತೆರಳಬೇಕಾದ ಅನಿವಾರ್ಯತೆ ಇಲ್ಲಿನ ಸಿಬ್ಬಂದಿಗಳಿಗೆ ಎದುರಾಗಿದ್ದು ಸಮಸ್ಯೆ ನಿವಾರಣೆ ಮಾಡುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಕಳೆದ ಹಲವಾರು ತಿಂಗಳಿನಿಂದ ಹಾಗೂ ಶುಕ್ರವಾರ ಸಂಜೆ ಸುಮಾರು 5ರ ಸಮಯದಲ್ಲಿ ಸಮಯದಲ್ಲಿ ಪಟ್ಟಣದ ಲಿಂಗೇನಹಳ್ಳಿಯ ಸಮೀಪವಿರುವ ಕಾರಮರಡಿ ಗುಟ್ಟೆಯಲ್ಲಿನ ದೊಡ್ಡ ಗುಂಡಿನ ಮೇಲೆ ಚಿರತೆ ಕಂಡು ಬರುತ್ತಿದ್ದು ಆದಷ್ಟು ಬೇಗ ಈ ಚಿರತೆಯನ್ನು ಹಿಡಿಯುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
