ಮಧುಗಿರಿ : ಆಕಸ್ಮಿಕ ಬೆಂಕಿಗೆ ತೊಗರಿಕಾಯಿ ಬಣವೆ ಭಸ್ಮ

  ಮಿಡಿಗೇಶಿ : 

     ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಗೆ ಸೇರಿದ ಮುದ್ದನೇರಳೆಕೆರೆ ಗ್ರಾಮದ ಸುನಿಲ್ ಬಿನ್ ಅಂಜನಮ್ಮ ಎನ್ನುವವರಿಗೆ ಸೇರಿದ ಸರ್ವೆ ನಂ.13 ಮತ್ತು ಸರ್ವೇ ನಂ. 16 ರಲ್ಲಿ ಬೆಳೆದ ವಾಣಿಜ್ಯ ಬೆಳೆ ತೊಗರಿ ಸುಮಾರು ಮೂರು ಎಕರೆಯಲ್ಲಿ ಬೆಳೆದಿದ್ದು, ಕಟಾವು ಮಾಡಿ, ಹೊಲದಲ್ಲಿಯೇ ಬಣವೆ ಹಾಕಿ ಸಂಗ್ರಹಣೆ ಮಾಡಲಾಗಿತ್ತು. ಜ. 20 ರಂದು, ತೊಗರಿ ಬಣವೆಗೆ ಆಕಸ್ಮಿಕ ಬೆಂಕಿ ಬಿದ್ದಿದ್ದು ತೊಗರಿಯ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಕುರಿತು ಸುನಿಲ್ ಬಿನ್ ಅಂಜನಮ್ಮ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

      ಎಎಸ್‍ಐ ತಾರಾಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಅಗ್ನಿ ಶಾಮಕ ದಳವನ್ನು ಕರೆಸಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಿರುತ್ತಾರೆ. ಘಟನೆ ಬಗ್ಗೆ ಪ್ರಕರಣವನ್ನು ದಾಖಲಿಸಿ ಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿರುತ್ತಾರೆ. ಸುಮಾರು 60,000 ರೂ. ನಷ್ಟವಾಗಿರುತ್ತದೆಂದು ಅಂದಾಜಿಸಲಾಗಿರುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap