ಮಧುಗಿರಿ : ಆಕಸ್ಮಿಕ ಬೆಂಕಿಗೆ ಹುಲ್ಲಿನ ಬಣವೆ ಸುಟ್ಟು ಕರಕಲು

  ಮಧುಗಿರಿ :

      ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ನೆರಳೇಕೆರೆ ಗ್ರಾಮದ ವಾಸಿ ರಂಗನಾಥಪ್ಪನು ಇತ್ತೀಚಿನ ದಿನಗಳಿಂದ ಬೆಳೆದ ಕಡ್ಲೆಬಳ್ಳಿ, ಜೋಳದ ಮೇವು, ತೊಗರಿ, ಅಳಸಂಡೆ, ಹುರುಳಿ, ರಾಗಿ ಹುಲ್ಲು ಸೇರಿದಂತೆ ತಮ್ಮ ದನಕರುಗಳಿಗೆ ಸಂಗ್ರಹಿಸಿಡಲಾಗಿದ್ದು ಮೇವಿಗೆ 28 ರ ಶುಕ್ರವಾರ  ರಾತ್ರಿ ಆಕಸ್ಮಿಕವಾಗಿ ಬಿದ್ದ ಬೆಂಕಿಯಿಂದಾಗಿ ಮೇವಿನ ಬಣವೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

     ಇದರಿಂದ ಸದರಿ ರೈತನಿಗೆ ಐವತ್ತು ಸಾವಿರ ರೂಪಾಯಿಗಳ ಅಂದಾಜು ನಷ್ಠವುಂಟಾಗಿದೆಯೆಂದು ಅಂದಾಜಿಸಲಾಗಿರುತ್ತದೆ ಆದ್ದರಿಂದ ಸದರಿ ರೈತನ ಸ್ಥಿತಿ ಚಿಂತಾಜನಕವಾಗಿರುತ್ತದೆ ದನಕರುಗಳ ಮೇವಿಗೆ ಬಹಳ ತೊಂದರೆಯಾಗಿರುತ್ತದೆ, ಸರ್ಕಾರದಿಂದ ಸಿಗಬಹುದಾದ ಸೌಲಭ್ಯ ಒದಗಿಸುವಂತೆ ಸರ್ಕಾರವನ್ನು ರೈತಾಪಿ ವರ್ಗ ಒತ್ತಾಯಿಸಿದೆ. ಸದರಿ ಘಟನಾಸ್ಥಳಕ್ಕೆ ಬಡವನಹಳ್ಳಿ ಪಿ.ಎಸ್.ಐ. ಹನುಮಂತರಾಯಪ್ಪ ಭೇಟಿ ನೀಡಿದ್ದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link