ಮಧುಗಿರಿ : ಮುಂದಿನ ತರಗತಿಗೆ ಬಡ್ತಿ ನೀಡಲು ತಹಸೀಲ್ದಾರ್‍ಗೆ ಮನವಿ

ಮಧುಗಿರಿ :

    ಡಿಪ್ಲೋಮಾ ಮಾದರಿಯಲ್ಲಿ ಮುಂದಿನ ತರಗತಿಗಳಿಗೆ ಬಡ್ತಿ ನೀಡುವಂತೆ ಆಗ್ರಹಿಸಿ ಉಪ ತಹಸೀಲ್ದಾರ್ ವರದರಾಜು ರವರಿಗೆ ಖಾಸಗಿ ಐಟಿಐ ಕಾಲೇಜುಗಳ ವಿದ್ಯಾರ್ಥಿಗಳು ಮನವಿ ಪತ್ರ ಸಲ್ಲಿಸಿದರು.

     ಐಟಿಐ ಕಾಲೇಜುಗಳ ತರಬೇತಿದಾರರಿಗೆ ಅನ್ವಯವಾಗುವಂತೆ ಈ ಹಿಂದೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗಿದೆ ಎಂದು ಉದ್ಯೋಗ ಮತ್ತು ತರಬೇತಿ ಇಲಾಖೆಯು ಆದೇಶ ಹೊರಡಿಸಿತ್ತು. ನಂತರ ಆದೇಶವನ್ನು ರದ್ಧು ಪಡಿಸಿ ಮತ್ತೆ ಪರೀಕ್ಷೆಗಳನ್ನು ನಡೆಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿತ್ತು.

     ಐಟಿಐನ ಎರಡು ವರ್ಷದ ತರಬೇತಿಯಲ್ಲಿ ಹೆಚ್ಚಾಗಿ ಪ್ರ್ರಾಯೋಗಿಕ ಪರೀಕ್ಷೆಗಳು ಇದ್ದು, ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆ ಕಾಲೇಜುಗಳಲ್ಲಿ ತರಬೇತಿಗಳು ಸರಿಯಾಗಿ ನಡೆದಿಲ್ಲ. ಆದ್ದರಿಂದ ಕೇಂದ್ರ ಡಿಜಿಇಟಿಯವರು ಹೊರಡಿಸಿರುವ ಹಿಂದಿನ ಆದೇಶದಂತೆ ನಮಗೆ ಮುಂದಿನ ತರಬೇತಿಗಳಿಗೆ ಬಡ್ತಿ ನೀಡಬೇಕೆಂದು ಮನವಿ ಪತ್ರದಲ್ಲಿ ಕೋರಿದ್ದಾರೆ.

    ಸಂದೀಪ್, ರಾಜಶೇಖರ್, ರಾಕೇಶ್, ಓಬಳೇಶ್, ಹೇಮಂತ್, ಪವನ್, ಚಂದನ್, ಶಿವಕುಮಾರ್, ಮಧುಸೂದನ್, ಚಂದ್ರಶೇಖರಯ್ಯ, ವಿನೋದ್ ಕುಮಾರ್, ನವೀನ್ ಕುಮಾರ್, ರಘುನಾಥ್ ಹಾಗೂ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap