ಮಧುಗಿರಿ : ಅಕಾಲ ಹೆರಿಗೆಯಲ್ಲಿ ತಾಯಿ-ಮಗು ಸಾವು

 ಮಧುಗಿರಿ : 

      ಮಧುಗಿರಿಯಲ್ಲಿ ಭಾನುವಾರ ಗರ್ಭಿಣಿಯೊಬ್ಬರು ತಮ್ಮ ಚೊಚ್ಚಲ ಹೆರಿಗೆಯಲ್ಲಿ ಮಗುವಿನೊಂದಿಗೆ ಮೃತಪಟ್ಟಿದ್ದಾರೆ. ವಿಶ್ವ ತಾಯಂದಿರ ದಿನದಂದೆ ಇಂತಹ ನೋವಿನ ಘಟನೆ ಜರುಗಿರುವುದು ವಿಧಿಯ ಕ್ರೂರ ಕೈವಾಡ ಎಂಬಂತಾಗಿದೆ.

      ಪಟ್ಟಣದ ಶ್ರೀ ವಿನಾಯಕ ಸ್ಟೋರ್ಸ್‍ನ ಮಾಲೀಕ ನಾರಾಯಣ್ ಬಾಬು ಮತ್ತು ಲತಾ ದಂಪತಿಯ ಪುತ್ರಿ ವಾಹಿನಿ (29) ಮೃತಪಟ್ಟ ದುರ್ದೈವಿಯಾಗಿದ್ದು, ಏಳು ವರ್ಷಗಳ ಹಿಂದೆ ಕಡೂರಿನಲ್ಲಿರುವ ಶಂತನ್ ಎನ್ನುವವರೊಂದಿಗೆ ವಿವಾಹವಾಗಿತ್ತು. ದಂಪತಿ ಬೆಂಗಳೂರಿನಲ್ಲಿ ವಾಸವಾಗಿದ್ದರು. 7 ತಿಂಗಳು ತುಂಬಿದ್ದ ಗರ್ಭಿಣಿ ವಾಹಿನಿ ಪ್ರಸವ ವೇದನೆಯಿಂದ ಮಗುವನ್ನು ಹಡೆದರಾದರೂ ಮಗು ಮೃತಪಟ್ಟಿತ್ತು. ಈ ಘಟನೆ ನಡೆದ ಕೆಲ ಗಂಟೆಗಳಲ್ಲಿ ತಾಯಿಯೂ ಸಹ ಮಗುವಿನೊಂದಿಗೆ ಮೃತಪಟ್ಟಿದ್ದಾರೆ. ಈ ಘಟನೆಯಿಂದಾಗಿ ಎರಡು ಕುಟುಂಬಗಳಲ್ಲಿ ದುಃಖ ಮುಗಿಲು ಮುಟ್ಟಿತ್ತು. ಲತಾ ನಾರಾಯಣ್ ರೋಟರಿ ಕ್ಲಬ್ ಅಧ್ಯಕ್ಷರಾಗಿ ಮೃತ ದೇಹಗಳಲ್ಲಿನ ಕಣ್ಣುಗಳನ್ನು ತೆಗೆದು ಎಷ್ಟೋ ಅಂಧರ ಜೀವನಕ್ಕೆ ಆಸರೆ ಯಾಗಿದ್ದರು.

      ಇಂತಹ ಸಮಾಜಸೇವೆ ಮಾಡುತ್ತಿದ್ದ ಕುಟುಂಬಕ್ಕೆ ಈ ರೀತಿಯಾಗಿರುವ ಹಿನ್ನೆಲೆಯಲ್ಲಿ ಮಧುಗಿರಿಯ ನಾಗರಿಕರಲ್ಲಿ ಶೋಕ ಮಡುಗಟ್ಟಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap