ಗ್ರಾಮೀಣ ಜನರಿಗೆ ಅರಿವು ಮೂಡಿಸಿದ ಆರೋಗ್ಯ ಇಲಾಖೆ

ದೊಡ್ಡೇರಿ :

     ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯ ಚಂಬೇನಹಳ್ಳಿ ಗ್ರಾಮದಲ್ಲಿ ‘ವೈದ್ಯರ ನಡಿಗೆ ಹಳ್ಳಿಯ ಕಡೆಗೆ’ ಕಾರ್ಯಕ್ರಮದ ಅಂಗವಾಗಿ ಸಂಶಯಾಸ್ಪದ ಕೊರೊನಾ ಪ್ರಾಥಮಿಕ ಸಂಪರ್ಕಿತರು ಹಾಗೂ ಇತರರಿಗೆ ಕೋವಿಡ್ ಪರೀಕ್ಷೆ ಮಾಡಲಾಯಿತು ಹಾಗೂ ಸಕ್ರೀಯ ಕೋವಿಡ್ ಸೋಂಕಿತರ ಮನೆಗಳು ಭೇಟಿ ನೀಡಿ ಆತ್ಮ ಸ್ಥೈರ್ಯದ ಜೊತೆಗೆ ಪೌಷ್ಟಿಕ ಆಹಾರ ಸೇವನೆ ಕುರಿತು ಅರಿವು ಮೂಡಿಸಲಾಯಿತು.

      ಮುಖ್ಯವಾಗಿ ಮುಂದಿನ ಆರು ತಿಂಗಳುಗಳ ಕಾಲ ಮಾಸ್ಕ್ ಧರಿಸುವುದು ಮತ್ತು ಅಂತರ ಕಾಯ್ದುಕೊಂಡು ಜೀವನ ನಡೆಸಲು ಸಾರ್ವಜನಿಕರಿಗೆ ತಿಳಿಸಲಾಯಿತು.

      ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಲಾವಣ್ಯ ಶೇಷಾದ್ರಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಭಾರತಿ, ಶಶಿಕುಮಾರ, ನಂಜಮ್ಮ, ಕುಸುಮ ಮತ್ತು ಗೊವಿಂದರಾಜು ಗ್ರೂಪ್ ಡಿ ನೌಕರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link