ನವದೆಹಲಿ:
ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೇಳಿದ್ದ ಎರಡು ಮೊಬೈಲ್ ಪೋನ್ಗಳನ್ನು ನಾಶಪಡಿಸಿರುವುದಾಗಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
2022ರ ಜುಲೈ 22ರಂದು ಕೇಂದ್ರ ಗೃಹ ಸಚಿವಾಲಯವು (ಎಂಎಚ್ಎ) ಅಬಕಾರಿ ಹಗರಣದಲ್ಲಿ ತನಿಖೆ ಪ್ರಾರಂಭಿಸಲು ಸಿಬಿಐಗೆ ನಿರ್ದೇಶನ ನೀಡಿತು. ಆ ದಿನದಿಂದ ಸಿಸೋಡಿಯಾ ಹೊಸ ಮೊಬೈಲ್ ಫೋನ್ ಬಳಸಲಾರಂಭಿಸಿದರು ಎಂದು ಮೂಲಗಳು ಹೇಳಿವೆ.
ಪ್ರಕರಣದ ತನಿಖೆ ನಡೆಸುತ್ತಿರುವಾಗ, ಸಿಸೋಡಿಯಾ ಅವರು 2020ರ ಜನವರಿ 1 ಮತ್ತು 2022ರ ಆಗಸ್ಟ್ 19 ರ ನಡುವೆ ಮೂರು ವಿಭಿನ್ನ ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದರು ಎಂದು ಸಿಬಿಐಗೆ ತಿಳಿದುಬಂದಿದೆ. 2022ರ ಆಗಸ್ಟ್ 19 ರಂದು, ತನಿಖಾ ಸಂಸ್ಥೆಯು ಶೋಧ ಕಾರ್ಯಾಚರಣೆಯನ್ನು ನಡೆಸಿತು ಮತ್ತು ಸಿಸೋಡಿಯಾ ಅವರಿಂದ ಒಂದು ಫೋನ್ ಅನ್ನು ವಶಪಡಿಸಿಕೊಂಡಿತು.
![](https://prajapragathi.com/wp-content/uploads/2023/05/sisodiya.jpg)