ಮಿಡಿಗೇಶಿ :
ಮಧುಗಿರಿ ಯಿಂದ ಪಾವಗಡಕ್ಕೆ ಹಾದು ಹೋಗುವ ರಾಜ್ಯ ಹೆದ್ದಾರಿ ಕೆ.ಶಿಫ್ ರಸ್ತೆ ಮಿಡಿಗೇಶಿ ಹಾಗೂ ಚಿನ್ನೇನಹಳ್ಳಿ ಮದ್ಯ ಭಾಗದ ರಸ್ತೆಯಲ್ಲಿ ಫೆ.2 ರಂದು ರಾತ್ರಿ 8 ಗಂಟೆಯಲ್ಲಿ ನೀರಕಲ್ಲು ಗ್ರಾಮದ ಪೈಯಿಂಟ್ ಕೆಲಸ ಮಾಡುವ ಕೂಲಿ ಕಾರ್ಮಿಕರಿಬ್ಬರು ತಮ್ಮ ಹೊಂಡಾ ಸ್ಕೂಟಿ ಕೆ.ಎ.04.ಜೆಟಿ 5672 ರಲ್ಲಿ ಮಿಡಿಗೇಶಿ ಕಡೆಯಿಂದ ಚಿನ್ನೇನಹಳ್ಳಿ ಕಡೆ ಬರುತ್ತಿರುವಾಗ ಅಪರಿಚಿತ ವಾಹನವು ಸದರಿ ಕೂಲಿ ಕಾರ್ಮಿಕರಾದ ರಾಮಾಂಜಿನೇಯ ಹಾಗೂ ಪ್ರದೀಪ್ ಎಂಬಿಬ್ಬರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸದರಿಯವರಿಬ್ಬರು ಚಿದ್ರ ಚಿದ್ರವಾಗಿ ಕೈಗಳು, ಕಾಲುಗಳು ಒಂದೊಂದು ಕತ್ತರಿಸಿ ಹೋಗಿದ್ದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುತ್ತಾರೆ.
ಘಟನಾ ಸ್ಥಳಕ್ಕೆ ಮಿಡಿಗೇಶಿ ಪಿ.ಎಸ್.ಐ ಹನುಮಂತರಾಯಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ