ಮಿಡಿಗೇಶಿ:
ಹೋಬಳಿಯ ಚೀಲನಹಳ್ಳಿ ಸಮೀಪವಿರುವ ರಾಮದೇವರ ಬೆಟ್ಟದ ಸುತ್ತಮುತ್ತ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಈ ಬೆಟ್ಟದ ಸುತ್ತ ಮುತ್ತ ಕೆಲ ಪ್ರದೇಶಗಳು ಸೇರಿದಂತೆ ಸುಮಾರು 500 ಎಕರೆಯಷ್ಟಿರುವ ಪ್ರದೇಶದಲ್ಲಿ ನೀಲಗಿರಿ, ಹುಣಸೆ ಮತ್ತಿತರ ಗಿಡ ಮರಗಳು ಅಗ್ನಿಗೆ ಆಹುತಿಯಾಗಿವೆ ಎನ್ನಲಾಗಿದೆ.
ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 11 ರ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಸಿತು. ಅರಣ್ಯ ಇಲಾಖೆಯವರು ವಿಷಯ ತಿಳಿದು ಸಂಜೆಯ ವೇಳೆಗೆ ಬೆಂಕಿಯನ್ನು ನಿಯಂತ್ರಿಸಿದ್ದರು. ಸಂಜೆ 6ರ ವೇಳೆಗೆ ಅಗ್ನಿ ಜ್ವಾಲೆ ತನ್ನ ರೌದ್ರವಾತಾರವನ್ನು ಹೆಚ್ಚಿಸಿ ಮತ್ತೆ ಸುಮಾರು 300 ಎಕರೆಯಲ್ಲಿದ್ದ ಗಿಡ ಮರ ಬಳ್ಳಿಗಳಿಗೂ ವ್ಯಾಪಿಸಿದೆ.
ಅಗ್ನಿ ಶಾಮಕ ದಳದವರು ಈ ಬೆಟ್ಟ ಗುಡ್ಡಗಳಲ್ಲಿ ಹೋಗಲು ಕಷ್ಟವಾಗಿರುವುದರಿಂದ ಅರಣ್ಯ ಇಲಾಖಾ ಸಿಬ್ಬಂದಿವರ್ಗದವರೆ ಬೆಳಗಿನಿಂದ ರಾತ್ರಿಯವರೆವಿಗೂ ಬೆಂಕಿ ನಂದಿಸುವ ಕಾರ್ಯದಲ್ಲಿ ಹರಸಾಹಸ ಪಡುತ್ತಿದ್ದಾರೆಂದು ತಿಳಿದು ಬಂದಿದೆ. ಶುಕ್ರವಾರದ ಹೊತ್ತಿಗೆ ಬೆಂಕಿ ಜ್ವಾಲೆ ನಂದಿಸುವ ಇಂಗಿತವನ್ನು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
