ಎನ್‌ಎಲ್‌ಎಸ್‌ಐಯು ವಿರುದ್ಧ ಕ್ರಮಕ್ಕೆ ಶಾಸಕರ ಆಗ್ರಹ

ಬೆಂಗಳೂರು:

     ಎನ್‌ಎಲ್‌ಎಸ್‌ಐಯು ವಸತಿ ಸೀಟು ವಿಚಾರ ಕುರಿತು ವಿಧಾನಸಭೆಯಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಅವರು ಪ್ರಶ್ನಿಸಿದರು.ಭಾರತದಲ್ಲಿನ 24 ರಾಷ್ಟ್ರೀಯ ಕಾನೂನು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಎನ್‌ಎಲ್‌ಎಸ್‌ಐಯು ನಲ್ಲಿ ಮಾತ್ರ ಸ್ಥಳೀಯ ನಿವಾಸಿಗಳಿಗೆ ಮೀಸಲಾತಿಯನ್ನು ಒದಗಿಸುವುದಿಲ್ಲ ಎಂದು ಗಮನಸೆಳೆದರು.

    ಕರ್ನಾಟಕದಲ್ಲಿ ಎನ್‌ಎಲ್‌ಎಸ್‌ಐಯುಗೆ 23 ಎಕರೆ ಭೂಮಿ ನೀಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರ 22 ಕೋಟಿ ರೂಪಾಯಿ ಅನುದಾನ ನೀಡಿದೆ. ಇದರ ಹೊರತಾಗಿ, 2020 ರಲ್ಲಿ, ಎನ್‌ಎಲ್‌ಎಸ್‌ಐಯು ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಲಾಯಿತು, ಕಾಯ್ದೆಯು ಕರ್ನಾಟಕ ವಿದ್ಯಾರ್ಥಿಗಳಿಗೆ 25 ಶೇಕಡಾ ಸೀಟು ಮೀಸಲಾತಿಯನ್ನು ಒದಗಿಸುತ್ತದೆ, ಸಂಸ್ಥೆಯು ಕಾಯಿದೆಗೆ ಬದ್ಧವಾಗಿರಬೇಕಿತ್ತು. ಭಾರತದಾದ್ಯಂತ 24 ಎನ್‌ಎಲ್‌ಎಸ್‌ಐಯು ಸಂಸ್ಥೆಗಳಿದ್ದು, ಮೀಸಲಾತಿ ನೀಡದ ಸಂಸ್ಥೆ ಎಂದರೆ ಅದು ಕರ್ನಾಟಕದಲ್ಲಿಸುವ ಸಂಸ್ಥೆ ಮಾತ್ರವೇ ಆಗಿದೆ ಎಂದು ಹೇಳಿದರು.

    “ರಾಜ್ಯ ಸರ್ಕಾರವು ಕಾಯಿದೆಯನ್ನು ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ಒದಗಿಸಬೇಕು. ಒಂದು ವೇಳೆ ಸಂಸ್ಥೆ ವಸತಿ ಸೀಟು ನೀಡುವಲ್ಲಿ ವಿಫಲವಾದರೆ, ಸರ್ಕಾರ ನೀಡಿದ ಸೌಲಭ್ಯಗಳನ್ನು ಹಿಂಪಡೆಯಬಹುದೇ ಎಂದು ಪರಿಶೀಲಿಸಬೇಕು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap