ಎಂ.ಎನ್.ಕೋಟೆ :
ಹಲವಾರು ವರ್ಷಗಳಿಂದ ವಿದ್ಯುತ್ ಸಮಸ್ಯೆ ಬಗೆಹಸದೆ ಸಾಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಶಿವರಾಂಪುರ ಗ್ರಾಮಸ್ಥರು ಗುರುವಾರ ಬೆಸ್ಕಾಂ ಕಛೇರಿಗೆ ಬೀಗ ಜಡಿದು ಪ್ರತಿಭಟಿಸಿದರು.
ಹಾಗಲವಾಡಿಯಿಂದ ವಿದ್ಯುತ್ ನೀಡುವ ಬದಲು ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ್ಣದಿಂದ ವಿದ್ಯುತ್ ನೀಡುತ್ತಿದ್ದು ಒಂದಲ್ಲ ಒಂದು ಸಮಸ್ಯೆ ನೆಪಹೇಳಿ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಈ ವಿದ್ಯುತ್ನಿಂದ ಪಂಪ್ಸೆಟ್ ಚಾಲುವಾಗುವುದಿಲ್ಲ,ಈ ಸಮಸ್ಯೆಯನ್ನು ಐದು ವರ್ಷಗಳ ಹಿಂದೆ ಬಗೆಹರಿಸುವುದಾಗಿ ಹಾಗಲವಾಡಿಯಿಂದ ಸ್ಥಳ ಪರೀಶಿಲಿಸಲು ಶಾಸಕರು ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿ ಕೇವಲ ಹದಿನೈದು ದಿನಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಹೇಳಿ ಹೋದವರು ತಿರುಗಿ ಬಂದಿಲ್ಲ. ಸಣ್ಣ ಸಮಸ್ಯೆಯಾದರು ರಾತ್ರಿಯಲ್ಲ ವಿದ್ಯುತ್ ಕಡಿತವಾಗುತ್ತದೆ. ನಾಲ್ಕು ದಿನವಾದರೂ ವಿದ್ಯುತ್ ಬಂದಿಲ್ಲ ಕೇಳುವರೇ ಇಲ್ಲದಂತಾಗಿದೆ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಗುರುರೇಣುಕರಾಧ್ಯ ಹೇಳಿದರು.
ಮುಷ್ಕರದ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಎಇಇ ಅನಿಲ್ ಕುಮಾರ್ ಮಾತನಾಡಿ, ಪ್ರತಿಭಟನೆ ಕೈಬಿಡಿ, ಇನ್ನೊಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. ಒಂಬತ್ತು ಕಿ.ಮೀ. ಲಿಂಕ್ ಲೈನ್ ಎಳೆಯಬೇಕಾಗಿರುವ ಕಾರಣ ವಿಳಂಬವಾಗಿದೆ. ಕೋರೋನಾ ಕಾರಣದಿಂದ ಟೆಂಡರ್ ಮಾಡಿರಲಿಲ್ಲ. ಈಗ ತುಮಕೂರು ವಿಭಾಗಕ್ಕೆ ನಲವತ್ತು ಕೋಟಿ ರೂ. ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕೆಲಸ ಆರಂಭವಾಗುವುದಷ್ಟೇ ಬಾಕಿ ಇದೆ, ಜನವರಿ ತಿಂಗಳ ಅಂತ್ಯದೊಳಗೆ ಕೆಲಸ ಪೂರ್ಣಗೊಳ್ಳುತ್ತದೆ ಎಂದು ಭರವಸೆ ನೀಡಿದ ನಂತರ ಹೋರಾಟಗಾರರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ರಾಮಯ್ಯ, ಕೃಷ್ಠಮೂರ್ತಿ, ರಾಜಣ್ಣ ಹಾಗೂ ಶಿವರಾಂಪುರ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ