ಭಗವಂತನ ರೂಪ ಕೇವಲ ದರ್ಶನಕ್ಕೆ ಇರುವುದು…ಪ್ರದರ್ಶನಕ್ಕೆ ಅಲ್ಲ : ಮೋದಿ

ವದೆಹಲಿ :

    ತಮ್ಮ ರಾಜಕಾರಣದ ಸ್ವಾರ್ಥಕ್ಕಾಗಿ ರಾಹುಲ್ ಗಾಂಧಿಯವರು ಈಶ್ವರನ ಫೋಟೋವನ್ನು ಸಂಸತ್ಗೆ ತಂದು ಹಿಂದೂಗಳ ಕುರಿತು ನೀಡಿದ್ದ ಹೇಳಿಕೆ ಖಂಡನಾರ್ಹ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿರುಗೇಟು ನೀಡಿದರು.ಇಂದು ನಡೆದ ಸಂಸತ್ ಕಲಾಪದಲ್ಲಿ ಈ ಬಗ್ಗೆ ಉಲ್ಲೇಖಿಸಿದ ಮೋದಿ, ಭಗವಂತನ ರೂಪ ಕೇವಲ ದರ್ಶನಕ್ಕೆ ಇರುವುದು…ಪ್ರದರ್ಶನಕ್ಕೆ ಅಲ್ಲ.

    ಈ ವಿಚಾರವನ್ನು ನಾವೆಲ್ಲರೂ ಚಿಕ್ಕವರಿಂದಲೂ ನೋಡುತ್ತಾ ಬಂದಿರುವುದಾಗಿ ವಿಪಕ್ಷ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು. ಈಶ್ವರನ ರೂಪ ಸ್ವಾರ್ಥ ಹಾಗೂ ಪ್ರದರ್ಶನಕ್ಕೆ ಬಳಸಬಾರದು. ನಿನ್ನೆ ಕಲಾಪದಲ್ಲಿ ರಾಹುಲ್ ಗಾಂಧಿ ಈಶ್ವರನ ಫೋಟೋ ಪ್ರದರ್ಶನ ಮಾಡಿದ್ದನ್ನು ಹಿಂದೂ ಸಮಾಜ ನೋಡಿ ಯೋಚಿಸುತ್ತಿದೆ ಎಂದು ಕುಟುಕಿದರು.

   ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಆರ್‌ಎಸ್‌ಎಸ್ನವರು ಮಾತ್ರ ಇಡೀ ಹಿಂದೂ ಸಮುದಾಯವಲ್ಲ ಎಂದು ನಿನ್ನೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಆ ವೇಳೆ ಸಂಸತ್ನಲ್ಲಿ ಶಿವನ ಫೋಟೋವನ್ನೂ ರಾಹುಲ್ ಪ್ರದರ್ಶಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap