ಭಾರತ ಹಿಂದೂ ರಾಷ್ಟ್ರ ಎನ್ನುವುದಕ್ಕೆ ಸಾಂವಿಧಾನಿಕ ಅನುಮೋದನೆಯ ಅಗತ್ಯವಿಲ್ಲ: ಮೋಹನ್ ಭಾಗವತ್

ಕೋಲ್ಕತ್ತಾ: 

    ಭಾರತ ಹಿಂದೂ ರಾಷ್ಟ್ರವಾಗಿದೆ  ಮತ್ತು ಅದು ಸತ್ಯವಾಗಿದೆ. ಇದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆಯ  ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ  ಮುಖ್ಯಸ್ಥ ಮೋಹನ್ ಭಾಗವತ್  ಹೇಳಿದರು. ಅವರು ಭಾನುವಾರ ಕೋಲ್ಕತ್ತಾದಲ್ಲಿ (Kolkata) ನಡೆದ ಸಮ್ಮೇಳನದಲ್ಲಿ ಮಾತನಾಡಿ, ಕೊನೆಯ ಒಬ್ಬ ವ್ಯಕ್ತಿಯಾದರೂ ಸರಿ ತನ್ನ ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಪೂರ್ವಜರ ವೈಭವವನ್ನು ಆಚರಿಸುವವರೆಗೆ ದೇಶವು ಹಿಂದೂ ರಾಷ್ಟ್ರವಾಗಿ ಉಳಿಯುತ್ತದೆ ಎಂದು ಅವರು ತಿಳಿಸಿದರು.

   ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅದಕ್ಕೆ ಸಾಂವಿಧಾನಿಕ ಅನುಮೋದನೆಯ ಅಗತ್ಯವಿದೆಯೇ? ಹಿಂದೂಸ್ತಾನ್ ಹಿಂದೂ ರಾಷ್ಟ್ರ. ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುವ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾನೆ. ಇಲ್ಲಿ ಪೂರ್ವಜರ ವೈಭವವನ್ನು ನಂಬುವ ಮತ್ತು ಪಾಲಿಸುವ ಒಬ್ಬ ವ್ಯಕ್ತಿ ಜೀವಂತವಾಗಿರುವವರೆಗೂ ಭಾರತವು ಹಿಂದೂ ರಾಷ್ಟ್ರವಾಗಿರುತ್ತದೆ ಎಂದು ಅವರು ತಿಳಿಸಿದರು. 

   ಆರ್‌ಎಸ್‌ಎಸ್ ಎಂದಿಗೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಂಸತ್ತು ಕಾನೂನನ್ನು ತಿದ್ದುಪಡಿ ಮಾಡುತ್ತದೆಯೇ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು, ಈ ಬಗ್ಗೆ ಸಂಸತ್ತು ತಿದ್ದುಪಡಿ ಮಾಡಲು ನಿರ್ಧರಿಸಿದರೆ ಮಾಡಲಿ ಅಥವಾ ಬಿಡಲಿ. ನಾವು ಹಿಂದೂಗಳು ಮತ್ತು ನಮ್ಮ ರಾಷ್ಟ್ರ ಹಿಂದೂ ರಾಷ್ಟ್ರವಾಗಿರುವುದರಿಂದ ನಾವು ಆ ಪದದ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದರು.

   ಸತ್ಯ, ಹುಟ್ಟಿನ ಆಧಾರದ ಮೇಲೆ ಜಾತಿ ವ್ಯವಸ್ಥೆಯು ಹಿಂದುತ್ವದ ಲಕ್ಷಣವಲ್ಲ. ವಿದೇಶಿ ಭಾಷೆಯ ಬದಲಿಗೆ ತಮ್ಮ ಮಾತೃಭಾಷೆಯನ್ನು ಬಳಸಬೇಕು. ಬಂಗಾಳಿ ಮಾತನಾಡುವ ಜನರ ಮನೆಯ ಪ್ರವೇಶದ್ವಾರದಲ್ಲಿ ವೆಲ್ ಕಮ್ ಬದಲಿಗೆ ಸ್ವಾಗತಮ್ ಎಂದು ಬರೆಯಿರಿ ಎಂದು ಹೇಳಿದರು.

   ಸಂಘವು ತೀವ್ರ ರಾಷ್ಟ್ರೀಯವಾದಿಯಾದರೂ ಅದು ಯಾವುದೇ ಮುಸ್ಲಿಂ ವಿರೋಧಿ ಭಾವನೆಯನ್ನು ಹೊಂದಿಲ್ಲ. ಯಾವಾಗಲೂ ಪಾರದರ್ಶಕತೆವಾಗಿ ಕೆಲಸ ಮಾಡಿದೆ. ಆದರೆ “ನಾವು ಮುಸ್ಲಿಂ ವಿರೋಧಿಗಳು ಎಂಬ ತಪ್ಪು ಗ್ರಹಿಕೆ ಇದೆ. ಆರ್‌ಎಸ್‌ಎಸ್ ಬಗ್ಗೆ ಅರ್ಥಮಾಡಿಕೊಳ್ಳಲು ಬಹಳಷ್ಟು ಇದೆ. ಆದರೆ ಅರ್ಥಮಾಡಿಕೊಳ್ಳಲು ಬಯಸದಿದ್ದರೆ, ಯಾರೂ ನಿಮ್ಮ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.  

   ಯಾವುದೇ ರಾಜಕೀಯ ಕಾರ್ಯಸೂಚಿ ಆರ್‌ಎಸ್‌ಎಸ್‌ಗೆ ಇಲ್ಲ. ಹಿಂದೂ ಧರ್ಮ ಬಲಿಷ್ಠವಾಗುವುದನ್ನು ನೋಡಿ ಹೆದರುವವರು ಹೆಚ್ಚಾಗಿರುವುದರಿಂದ ಭಾರತ ವಿರೋಧಿ ಮತ್ತು ಸಂಘ ವಿರೋಧಿ ಪ್ರಚಾರ ತೀವ್ರವಾಗಿ ಹೆಚ್ಚಾಗುತ್ತಿದೆ. ಜನರು ಆರ್‌ಎಸ್‌ಎಸ್ ಬಗ್ಗೆ ಅಭಿಪ್ರಾಯಗಳನ್ನು ರೂಪಿಸಲು ಸ್ವತಂತ್ರರು. ಆದರೆ ಇದು ಸತ್ಯವನ್ನು ಆಧರಿಸಿರಬೇಕು ಎಂದು ಅವರು ಹೇಳಿದರು.

Recent Articles

spot_img

Related Stories

Share via
Copy link