ತುರುವೇಕೆರೆ:
2023 ವಿಧಾನ ಸಭಾ ಚುನಾವಣೆಗೆ ತುರವೇಕೆರೆ ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಸಾವಿರಾರು ಬೆಂಬಲಿಗರೊಂದಿಗೆ ಗುರುವಾರ ಮೆರವಣಿಗೆ ನೆಡೆಸಿ ನಾಮಪತ್ರ ಸಲ್ಲಿಸಿದರು.
ಪಟ್ಟಣದ ತಿಪಟೂರು ರಸ್ತೆಯ ಕೃಷ್ಣ ಚಿತ್ರಮಂದಿರದಿAದ ಹೊರಟು ಜೆಡಿಎಸ್ ಶಾಲುಗಳನ್ನು ಹೊದ್ದು, ತೆನೆಹೊತ್ತ ಮಹಿಳೆಯ ಬಾವುಟದೊಂದಿಗೆ ಕಾರ್ಯಕರ್ತರು ಆಗಮಿಸಿ ತಾಲ್ಲೂಕು ಕಛೇರಿ ವೃತ್ತದ ವರೆಗೂ ತಮ್ಮ ನೆಚ್ಚಿನ ನಾಯಕ ಎಂ.ಟಿ.ಕೃಷ್ಣಪ್ಪನವರಿಗೆ ಜೈಕಾರ ಹಾಕುತ್ತ ಮೆರವಣಿಗೆಯಲ್ಲಿ ಸಾಗಿದರು.
ಪಟ್ಟಣದ ಕೃಷ್ಣ ಟಾಕೀಸ್ ಮುಂಬಾಗದಲ್ಲಿ ಬೆಳಗಿನಿಂದಲೇ ಸಾವಿರಾರು ಕಾರ್ಯಕರ್ತರು ಹಳ್ಳಿಗಳಿಂದ ಆಗಮಿಸಿ ಜೆಡಿಎಸ್ ಬಾವುಟ ಹಿಡಿದು, ಎಂ.ಟಿ.ಕೃಷ್ಣಪ್ಪನವರ ಪರವಾಗಿ ಜಯಘೋಷ ಮೊಳಗಿಸುತ್ತಾ, ಬ್ಯಾಂಡ್ಸಟ್ ವಾದ್ಯಕ್ಕೆ ನೃತ್ಯ ಮಾಡುತ್ತಾ ಹಬ್ಬದ ವಾತಾವರಣ ಸೃಷ್ಠಿಸಿದರು. ಮದ್ಯಾನಃ 1ರಿಮದ 3ರವರೆಗೆ ಚುನಾವಣಾಧಿಕಾರಿಗಳು ನೀಡಿದ್ದ ಸಮಯದಂತೆ ಮದ್ಯಾಹ್ನ ಒಂದು ಗಂಟೆ ವೇಳೆಗೆ ಆರಂಭವಾದ ಮೆರವಣಿಗೆಯಲ್ಲಿ ಗುಬ್ಬಿ ಬೆಟ್ಟಸ್ವಾಮಿಗೌಡ ಸೇರಿದಂತೆ ಸ್ಥಳೀಯ ಫ್ರಮುಖ ಮುಖಂಡರು ತೆರದ ವಾಹನದಲ್ಲಿ ಜನರತ್ತ ಕೈ ಮುಗಿದು ಸಾಗಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರ ಮಧ್ಯೆ ಮೆರವಣಿಯಲ್ಲಿ ನೂರಾರು ಜನರು ತಮ್ಮ ನೆಚ್ಚಿನ ನಾಯಕನತ್ತ ಕೈಬೀಸುವ ಮೂಲಕ ಶುಭಹಾರೈಸಿದರು.
ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪನವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಈ ಚುನಾವಣೆ ನನ್ನ ಅಳಿವು ಉಳಿವಿನ ಪ್ರಶ್ನೆಯಾಗಿದ್ದು ಇದೊಂದು ಬಾರಿ ನನಗೆ ಆಶೀರ್ವಾದ ಮಾಡಿ ತಮ್ಮ ಸೇವೆಗೆ ಅವಕಾಶ ಮಾಡಿಕೊಡಿ. ನನ್ನ ಅವಧಿಯಲ್ಲಿ ಹಲವಾರು ಶಾಶ್ವತ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದು ನಾನು ಸಚಿವನಾಗಿ ತುರುವೇಕೆರೆ ತಾಲ್ಲೂಕನ್ನು ಜಿಲ್ಲಾ ಕೇಂದ್ರವಾಗಿಯೂ ಹಾಗೂ ಸಿ.ಎಸ್.ಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿಯೂ ಮಾಡಲಿದ್ದೇನೆ.
ಕಾರ್ಯಕರ್ತರು ಗೆದ್ದೆವು ಎಂಬುದನ್ನು ಬಿಟ್ಟು ನಾವು ಗೆಲ್ಲಲೇಬೇಕೆಂಬ ಛಲ ಹೊತ್ತು ಬೂತ್ ಮಟ್ಟದಲ್ಲಿ ಕಾರ್ಯ ನಿರ್ವಹಿಸಿ ಹೆಚ್ಚು ಮತ ಹಾಕಿಸುವ ಮೂಲಕ ನನ್ನ ಗೆಲುವಿಗೆ ಪಣತೊಡಿ ಎಂದು ಮನವಿ ಮಾಡಿಕೊಂಡರು.
ಇತ್ತೀಚೆಗಷ್ಟೇ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಗುಬ್ಬಿ ಬೆಟ್ಟಸ್ವಾಮಿಗೌಡ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ಶೂನ್ಯವಾಗಿದ್ದು ಜನತೆ ಬಿಜೆಪಿ ಆಡಳಿತಕ್ಕೆ ಬೇಸತ್ತಿದ್ದಾರೆ. 2023 ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲಿದೆ. ಆ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಕರ್ತರು ಅತ್ಯಧಿಕ ಮತಗಳಿಂದ ಎಂ.ಟಿ.ಕೃಷ್ಣಪ್ಪನವರನ್ನು ಗೆಲ್ಲಿಸುವ ಮೂಲಕ ಹೆಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡೋಣ ಎಂದರು.
ಈ ಸಂದರ್ಬದಲ್ಲಿ ಮುಖಂಡರುಗಳಾದ ಬಾಣಸಂದ್ರರಮೇಶ್, ರಮೇಶ್ ಗೌಡ, ದೊಡ್ಡಾಘಟ್ಟಚಂದ್ರೇಶ್, ದಂಡಿನಶಿವರಶAಕರೇಗೌಡ, ರಾಜೀವ್ಕೃಷ್ಣಪ್ಪ, ಮಂಗೀಕುಪ್ಪೆಗAಗಣ್ಣ, ವೆಂಕಟಾಪುರಯೋಗೀಶ್, ಎಡಗಿಹಳ್ಳಿವಿಶ್ವನಾಥ್, ಹಾವಾಳರಾಮೇಗೌಡ, ಜಯರಾಮ್, ಕಾಂತರಾಜು, ಪ್ರಸನ್ನಕುಮಾರ್ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಟ್ರಾಫಿಕ್ ಜಾಮ್: ಜೆಡಿಎಸ್ ಮೆರವಣಿಗೆ ತಾಲ್ಲೂಕು ಕಚೇರಿ ವೃತ್ತದಲ್ಲಿ ಸೇರಿದ ಜನದಟ್ಟಣೆ ಸಂದರ್ಬದಲ್ಲಿ ಕೆಲಕಾಲ ವಾಹನ ಸಂಚಾರ ವ್ಯತ್ಯಯವಾಗಿ ಆಂಬುಲೆನ್ಸ್ ವಾಹನಕ್ಕೂ ತೊಂದರೆಯಾಯಿತು. ಮೆರವಣಿಗೆ ಸಂಧರ್ಭದಲ್ಲಿ ರಸ್ತೆಯುದ್ದಕ್ಕೂ ಕಾರ್ಯಕರ್ತರಿಗೆ ದಣಿವಾರಿಸಿಕೊಳ್ಳಲು ಮಜ್ಜಿಗೆ ಹಾಗೂ ನೀರಿನ ಬಾಟಲ್ ನೀಡಿದ್ದರಿಂದ ರಸ್ತೆ ತುಂಬ ಖಾಲಿ ಮಜ್ಜಿಗೆ ಪ್ಯಾಕೆಟ್ ಹಾಗೂ ನೀರಿನ ಬಾಟಲುಗಳು ಚೆಲ್ಲಾಡಿದ್ದರಿಂದ ವಾಹನಗಳ ಚಕ್ರಕ್ಕೆ ಸಿಲುಕಿದ ಖಾಲಿ ಪ್ಲಾಸ್ಟಿಕ್ ಬಾಟಲ್ಗಳಿಂದ ಪಟ್ ಪಟ್ ಶಬ್ದ ಬರುತ್ತಿದ್ದರಿಂದ ಪಟಾಕಿ ಶಬ್ದವೆಂಬAತೆ ಪಾದಚಾರಿಗಳಿಗೆ ಭಾಸವಾಗುತ್ತಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
