ಕೊರಟಗೆರೆ:-
ಮೈಕ್ರೋ ಫೈನಾನ್ಸ್ ನವದಿಂದ 4.5 ಲಕ್ಷ ರೂಪಾಯಿ ರಸ್ತೆ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡಿದ ದರೋಡೆಕೋರರನ್ನ ಕೊರಟಗೆರೆ ಪೊಲೀಸ್ ನವರು ದರೋಡೆಯಾದ 2 ಗಂಟೆಯಲ್ಲಿ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕೊರಟಗೆರೆ ತಾಲೂಕಿನ ಹೊರವಲಯದ ಹಂಚಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಯ್ಯರಪ್ಪನಪಾಳ್ಯ ಬಳಿ ಈ ದರೋಡೆ ನಡೆದಿದ್ದು, ಸುಂದರ್ ಎಂಬುವ ವ್ಯಕ್ತಿ 4.5 ಲಕ್ಷ ಫೈನಾನ್ಸ್ ಅಮೌಂಟ್ ತೆಗೆದುಕೊಂಡು ದ್ವಿಚಕ್ರವಾಹನದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಕಾರಿನಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಮಿಂಚಿನ ವೇಗದಲ್ಲಿ ಹಣ ಕಿತ್ಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮೂಕಾಂಬಿಕಾ ಫೈನಾನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಂದರ್ ಹಾಗೂ ಮಂಜುನಾಥ್ ಎಂಬ ಇಬ್ಬರು ಫೈನಾನ್ಸ್ ಹಣ ಇಟ್ಟುಕೊಂಡು ಹೋಗುತ್ತಿದ್ದ ಯುವಕರರನ್ನ ಬೆಂಗಳೂರು ಮೂಲದ ಅಶೋಕ್ ಸೇರಿದಂತೆ ನಾಲ್ಕು ಜನ ಯುವಕರು ಕಾರಿನಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ದರೋಡೆ ಮಾಡಿಕೊಂಡು ನಾಲ್ಕುವರೆ ಲಕ್ಷ ಕಿತ್ತುಕೊಂಡು ಸಿನಿಮೀಯ ರೀತಿಯಲ್ಲಿ ದರೋಡೆಕೋರರು ಪರಾರಿ ಯಾಗಿದ್ದಾರೆ ಎನ್ನಲಾಗಿದೆ.
*ಸ್ನೇಹಿತನಿಂದಲೇ ವಂಚನೆ*
ಮೂಕಾಂಬಿಕಾ ಫೈನಾನ್ಸ್ ನಲ್ಲಿ ಸುಂದರ್ ಹಾಗೂ ಮಂಜುನಾಥ್ ಎಂಬುವರು ಫೈನಾನ್ಸ್ ನಿಂದ ಅಂಗಡಿಗಳು ಸೇರಿದಂತೆ ಕೆಲವು ವ್ಯಕ್ತಿಗಳಿಗೆ ಹಣ ನೀಡಿ ದಿನ ಪ್ರತಿ ವಸೂಲಿ ಮಾಡುತ್ತಿದ್ದವರು ಎನ್ನಲಾಗಿದ್ದು, ಇವರಿಬ್ಬರಲ್ಲಿ ಮಂಜುನಾಥ್ ಎಂಬ ಆರೋಪಿ ಪ್ರತಿದಿನ ಲಕ್ಷಾಂತರ ರೂಪಾಯಿ ಫೈನಾನ್ಸಿ ವಸೂಲಿ ಮಾಡಿದ್ದನ್ನ ಮಾಲೀಕರಿಗೆ ಲೆಕ್ಕ ಕೊಡಲು ಪ್ರತಿದಿನ ಇದೇ ಮೊದಲು ಲಕ್ಷಾಂತರ ಹಣ ತೆಗೆದುಕೊಂಡು ಇದೇ ಮಾರ್ಗದಲ್ಲಿ ಪ್ರತಿ ದಿನ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಸುಂದರ ನನ್ನ ಜೊತೆಯಲ್ಲಿಯೇ ಇದ್ದ ಸ್ನೇಹಿತ ಮಂಜುನಾಥ್ ದರೋಡೆ ಎಂಬುವ ನೆಪದಲ್ಲಿ ಹಣ ಹೊಡೆಯಲು ಸಂಚುರೂಪಿಸಿದ್ದ ಎನ್ನಲಾಗಿದೆ.
*2 ಬಾರಿ ವಿಫಲ ಪ್ರಯತ್ನ*
ಇದೇ ತಂಡ ಸುಂದರ ಎರಡು ಬಾರಿ ದರೋಡೆಗೆ ವಿಫಲ ಪ್ರಯತ್ನ ನಡೆಸಿದ್ದರು ಎನ್ನಲಾಗಿದ್ದು, ಒಂದು ಬಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಕೆಳಗೆ ಬಿದ್ದು ಡ್ಯಾಮೇಜ್ ಆದ ಪರಿಣಾಮ ಅಂದು ಫೈನಾನ್ಸ್ ನ ಹಣ ಸಹ ಕಡಿಮೆ ಇದ್ದ ಪರಿಣಾಮ ಅಂದು ಯಾವುದೇ ದರೋಡೆ ನಡೆಸದೆ ಆರೋಪಿಗಳು ಕೈ ಚೆಲ್ಲಿ ತೆರಳಿದ್ದರೂ ಎನಲಾಗಿದೆ.
*ಸ್ನೇಹಿತನ ಅಣ್ಣತಮ್ಮಂದಿರಿಂದಲೇ ದರೋಡೆ*
ಸುಂದರ ಹಾಗೂ ಮಂಜುನಾಥ್ ಪ್ರತಿದಿನ ಮೂಕಾಂಬಿಕಾ ಫೈನಾನ್ಸ್ ನಲ್ಲಿ ಕಾರ್ಯ ನಿರ್ವಹಿಸಿಕೊಂಡು ಪ್ರತಿದಿನ ಕಂತಿನ ಹಣವನ್ನು ಪಡೆದು ಲಕ್ಷಾಂತರ ರೂಪಾಯಿ ದ್ವಿಚಕ್ರ ವಾಹನದಲ್ಲಿಯೇ ಸಾಗಿಸುತ್ತಿದ್ದರು ಎನ್ನಲಾಗಿದ್ದು, ಇದನ್ನು ಅರಿತ ಜೊತೆಯಲ್ಲಿಯೇ ಇದ್ದ ಸ್ನೇಹಿತ ಮಂಜುನಾಥ್ ಬೆಂಗಳೂರಿನ ಲ್ಲಿ ಫ್ಯಾಕ್ಟರಿ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಣ್ಣತಮ್ಮಂದಿರನ್ನ ಈ ದರೋಡೆ ಕಾರ್ಯಕ್ಕೆ ಬಳಸಿಕೊಂಡು ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.
*ಆರೋಪಿಯೇ ಪೊಲೀಸ್ ಠಾಣೆಗೆ ತೆರಳಿ ದೂರು*
ಆರೋಪಿ ಮಂಜುನಾಥ್ ಸ್ನೇಹಿತ ಸುಂದರ ಜೊತೆಗೆ ದರೋಡೆಯಾಗಿದೆ ಎಂದು ನಂಬಿಸಿ ಕೊರಟಗೆರೆ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸುತ್ತಾನೆ, ದೂರಿನ ಬೆನ್ನುಹತ್ತಿದ ಕೊರಟಗೆರೆ ಸಿಪಿಐ ಅನಿಲ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ತೀರ್ಥೇಶ್ ತಂಡ ಮಿಂಚಿನ ಸಂಚಲನದ ರೂಪದಲ್ಲಿ ದರೋಡೆಯಾದ ಎರಡೇ ಗಂಟೆಯಲ್ಲಿ ಆರೋಪಿಗಳನ್ನು ಪತ್ತೆಹಿಡಿದು ಎಡೆಮುರಿ ಕಟ್ಟಿದ್ದಾರೆ ಎನ್ನಲಾಗಿದೆ.
*2 ಗಂಟೆಯಲ್ಲಿಯೇ ಆರೋಪಿಗಳ ಬಂಧನ*
ದರೋಡೆ ಯಾದ ವಿಚಾರ ತಿಳಿದ ತಕ್ಷಣ ಕಾರ್ಯೋನ್ಮುಖ ರಾದ ಕೊರಟಗೆರೆ ಪೊಲೀಸ್ ನವರು ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಹಾಗೂ ಸಿಪಿಐ ಅನಿಲ್ ಮಾರ್ಗದರ್ಶನದಲ್ಲಿ ದರೋಡೆಕೋರರ ಬಂಧನದ ಕರೆ ಚರಣಿಯನ್ನು ಕೊರಟಗೆರೆ ಪಿಎಸ್ಐ ತೀರ್ಥೇಶ್,ಕೋಳಾಲ ಪಿಎಸ್ಐ ಅಭಿಷೇಕ ಪೊಲೀಸ್ ಸಿಬ್ಬಂದಿಗಳಾದ ದೊಡ್ಡ ಲಿಂಗಯ್ಯ, ಮೋಹನ್, ಗಣೇಶ್, ಮಧು ದರುಡೆಕೋರರನ್ನ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರು ಜನ ದರೋಡೆಕೋರರನ್ನು ಬಂಧಿಸಲಾಗಿ, ಇಬ್ಬರು ಆರೋಪಿಗಳು ತಲೆಮರಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಬಂಧನಕ್ಕೂ ಬಲೆಭೀಸಿದ್ದಾರೆ ಎನ್ನಲಾಗಿದೆ.
