ತುರುವೇಕೆರೆ : ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯ ಕೊಲೆ!!

ತುರುವೇಕೆರೆ :

     ತಾಲೂಕಿನ ಮಾಯಸಂದ್ರದಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ಮಂಜುನಾಥ (30) ಸಾವಿನ ಪ್ರಕರಣವನ್ನು ಭೇದಿಸಿರುವ ಪೋಲಿಸರು ಮೃತನ ಪತ್ನಿ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ನವೆಂಬರ್ 12 ರಂದು ತನ್ನ ಮನೆಯಲ್ಲಿ ಮಂಜುನಾಥ ಸಾವನ್ನಪ್ಪಿದ್ದಾನೆ. ಪತ್ನಿ ವಿದ್ಯಾ ತನ್ನ ಗಂಡ ನಿಧನ ಹೊಂದಿದ ಸಂಗತಿಯನ್ನು ಪತಿಯ ಪೋಷಕರಿಗೆ ತಿಳಿಸಿದ್ದಾಳೆ. ಆರೋಗ್ಯದಲ್ಲಿ ಏರುಪೇರಾದ ಕಾರಣಕ್ಕೆ ಮಂಜುನಾಥ ಕೊನೆಯುಸಿರೆಳೆದಿರಬಹುದು ಎಂದು ಮಂಜುನಾಥನ ಪೋಷಕರು ನಂಬಿ ಮಂಜುನಾಥನ ಶವವನ್ನು ಪತ್ನಿಯ ಊರಾದ ಚಿಕ್ಕಶೆಟ್ಟಿಕೆರೆಯಲ್ಲಿ ದಹನ ಮಾಡಲು ಸಿದ್ದತೆ ಮಾಡಿ ಶವವನ್ನು ಚಿತೆಯ ಮೇಲೆ ಮಲಗಿಸಿದ ವೇಳೆ ಮೃತ ಮಂಜುನಾಥನ ತಂದೆಗೆ ತನ್ನ ಮಗನ ಸಾವು ಅಸಹಜವಾಗಿದೆ ಎಂಬ ಅನುಮಾನ ಮೂಡಿತ್ತು. ಅವರು ಪೋಲಿಸರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೋಲಿಸರು ಚಿತೆಯ ಮೇಲಿರಿಸಲಾಗಿದ್ದ ಮಂಜುನಾಥನ ಶವವನ್ನು ತುರುವೇಕೆರೆಯ ಶವಾಗಾರಕ್ಕೆ ತಂದು ಮರಣೋತ್ತರ ಪರೀಕ್ಷಾ ನಡೆಸಿ ಪೋಲಿಸರು ಸಹಜವಾಗೇ ಮಂಜುನಾಥನ ಶವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು. ಮಂಜುನಾಥನ ಅಂತ್ಯ ಸಂಸ್ಕಾರ ನಂತರ ತನಿಖೆ ಮುಂದುವೆರೆಸಿದ ಪೋಲಿಸರು ಮಂಜುನಾಥನ ಪತ್ನಿ ವಿದ್ಯಾಳ ಮೊಬೈಲ್ ಫೋನ್‍ನ ಮಾಹಿತಿ ಕಲೆಹಾಕಲಾಗಿದ್ದು ಕೊಲೆಯ ರಹಸ್ಯ ಬಯಲಾಗಿದೆ.

 ಅಕ್ರಮ ಸಂಬಂದ ಕೊಲೆ:

      ಮೃತನ ಹೆಂಡತಿ ವಿದ್ಯಾ ಢಣನಾಯಕನಪುರದ ಯೋಗೀಶ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹಾಗೂ ಮಾಯಸಂದ್ರದ ಗಿರೀಶ್ ಎಂಬುವವರೊಂದಿಗೆ ಹೆಚ್ಚು ಗೆಳೆತನವಿತ್ತು ಎಂಬ ಸಂಗತಿ ಬೆಳಕಿಗೆ ಬಂದು ಈ ವಿಷಯದಲ್ಲಿ ಮೃತ ಮಂಜುನಾಥ ಮತ್ತು ವಿದ್ಯಾಳೊಂದಿಗೆ ಈ ಮದ್ಯೆ ಜಗಳವಾಗಿತ್ತು ಎಂದು ತಿಳಿದು ಬಂದಿದೆ. ನವೆಂಬರ್ 12 ರಂದು ರಾತ್ರಿ ಮಂಜುನಾಥನನ್ನು ಪತ್ನಿ ವಿದ್ಯಾ, ಪ್ರಿಯಕರ ಯೋಗೀಶ್ ಮತ್ತು ಗಿರೀಶ್ ಮೂವರೂ ಸೇರಿ ಕತ್ತು ಹಾಗೂ ಇನ್ನಿತರ ಅಂಗಾಗಗಳನ್ನು ಹಿಸುಕಿ ಕೊಲೆಗೈದಿದ್ದಾರೆ ಎಂಬ ಸಂಗತಿ ಹೊರ ಬಿದ್ದಿದೆ. ಪತ್ನಿ ವಿದ್ಯಾ, ಪ್ರಿಯಕರ ಯೋಗೀಶ್ ಮತ್ತು ಗಿರೀಶ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

     ಹೆಚ್ಚುವರಿ ಎಸ್.ಪಿ. ಉದೇಶ್, ಡಿವೈಎಸ್‍ಪಿ ಗಾನಕುಮಾರ್ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸಿದ ಸಿ.ಪಿ.ಐ. ನವೀನ್ ಹಾಗೂ ಪಿ.ಎಸ್.ಐ. ಪ್ರೀತಂ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಂಸಿಕೃಷ್ಣ ಅಭಿನಂದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link