ನಾಗರಹೊಳೆ : ರೈಲು ತಡೆಗೋಡೆಯ ನಡುವೆ ಸಿಲುಕಿದ ದೈತ್ಯ ಆನೆ….!

ಬೆಂಗಳೂರು :

    2018 ನೇ ಇಸವಿಯಲ್ಲಿ ಗಂಡಾನೆಯೊಂದು ರೈಲ್ವೆ ತಡೆಗೋಡೆಗೆ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆಯೊಂದು ನಡೆದಿತ್ತು. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಬೇಲಿ ದಾಟುವ ಸಂದರ್ಭದಲ್ಲಿ ಆನೆಯೊಂದು ತಡೆಗೋಡೆಯ ನಡುವೆ ಸಿಲುಕಿ ಒದ್ದಾಡಿದೆ. ವಿಷಯ ಗೊತ್ತಾದ ಕೂಡಲೇ ಅರಣ್ಯಾಧಿಕಾರಿಗಳು ಬಂದು ಜೆಸಿಬಿಯ ಸಹಾಯದಿಂದ ತಡೆಗೋಡೆಯ ಒಂದು ಕಂಬವನ್ನು ಕೆಡವುವ ಮೂಲಕ ಆನೆಯನ್ನು ರಕ್ಷಿಸಿದ್ದಾರೆ. ನಂತರ ಆನೆ ಸುರಕ್ಷಿತವಾಗಿ ಕಾಡಿಗೆ ತಲುಸಿದ್ದು, ಗಜರಾಜನ ರಕ್ಷಣಾ ಕಾರ್ಯದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

  ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಆನೆಯೊಂದು ರೈಲು ತಡೆಗೋಡೆಯ ಮಧ್ಯೆ ಸಿಲುಕಿ ಒದ್ದಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ನಂತರ ತಡೆಯೋಡೆಯ ಒಂದು ಕಂಬವನ್ನು ಜಿಸಿಬಿ ಸಹಾಯದಿಂದ ಕೆಡವುತ್ತಿದ್ದಂತೆ ತನ್ನನ್ನು ತಾನು ಬಿಡಿಸಿಕೊಂಡು ಅಲ್ಲಿಂದ ಆನೆ ಸೀದಾ ಓಡಿ ಹೋಗಿದೆ.
   ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಅರಣ್ಯ ಪ್ರದೇಶದ ಗಡಿ ಭಾಗಗಳಲ್ಲಿ ರೈಲು ತಡೆಗೋಡೆಯನ್ನು ನಿರ್ಮಿಸಲಾಗಿದ್ದು, ಈ ಹಿಂದೆಯೂ ಆನೆಗಳು ಈ ತಡೆಗೋಡೆಯ ನಡುವೆ ಸಿಲುಕಿದ ಹಾಗೂ ಇದರಿಂದ ಸಾವನ್ನಪ್ಪಿದ ಘಟನೆಗಳು ನಡೆದಿವೆ.

Recent Articles

spot_img

Related Stories

Share via
Copy link