ನಾಯಕನಹಟ್ಟಿ:
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದರಿಂದ ಮುಂದಿನ ದಿನಗಳಲ್ಲಿ ಭವ್ಯ ಶಿಲ್ಪಿಗಳಾಗುತ್ತಾರೆ.ಎಂದು ಸಿ.ಇ.ಓ & ಫೌಂಡರ್ ಆಫ್ ಸ್ಕೂನೊವೇಟ್ ದಾವಣಗೆರೆ ನಾಗರಾಣಿ.ಎನ್.ಎಸ್ ಹೇಳಿದರು. ಪಟ್ಟಣದ ಸ್ಕೂನೊವೇಟ್ ಅಕಾಡಮಿ ಶಾಲೆಯಲ್ಲಿ ಶಾಲೆಯ ಮೊದಲ ದಿನವಾದ ಗುರುವಾರ ವಿದ್ಯಾರ್ಥಿಗಳನ್ನು ಸಂತೋಷದಿಂದ ಆಗಮಿಸಿ ಶಿಕ್ಷಕಿಯರು ನಗು ಮುಖದೊಂದಿಗೆ ಆರ್ಟ್ & ಕ್ರಾಫ್ಟ್ ಹೂವು ನೀಡಿ ಮಕ್ಕಳನ್ನು ಬರಮಾಡಿಕೊಂಡರು.
ನಂತರ ಮಾತನಾಡಿದ ಅವರು ಮಕ್ಕಳಿಗೆ ಸಕರಾತ್ಮಕ ಬೆಳವಣಿಗೆಯನ್ನು ಮೂಡಿಸುವುದು.ಶುಚಿತ್ವ, ಶಿಸ್ತುಬದ್ಧ ಶಿಕ್ಷಣವನ್ನು ಹೇಳಿಕೊಡುತ್ತೇವೆ.ನಮ್ಮ ಶಾಲೆಯಲ್ಲಿ 20 ಮಕ್ಕಳು ಮಾತ್ರ ಇದ್ದಾರೆ. ಮಕ್ಕಳು ಸ್ವತಂತ್ರವಾಗಿ ಕಲಿಯಬೇಕು. ಎಂಬ ನಮ್ಮ ಉದ್ದೇಶ ಪೋಷಕರು ಸಹ ನಮಗೆ ಬಹಳ ಪ್ರೋತ್ಸಾಹ ನೀಡುತ್ತಾರೆ.
ಶಾಲೆಯ ಮೊದಲ ದಿನವು ಯಾವುದೇ ಮಗುವಿಗೆ ನಿಜವಾದ ಮೈಲುಗಲ್ಲು ಆಗಿರುತ್ತದೆ.ಶಾಲೆಯ ಮೊದಲ ದಿನವು ಆದ್ಬುತ ಯಶಸ್ಸನ್ನು ಹೊಂದಿದೆ.ಇದು ಉತ್ಸಹ, ಹೊಸ ಸ್ನೇಹ, ಕಲಿಕೆಯ ಹೊಸ ಉತ್ಸಹದಿಂದ ಮೊದಲ ದಿನವಾಗಿದೆ ಎಂದರು. ನಮ್ಮ ಸಂಸ್ಥೆಯಿAದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ನಮ್ಮ ಮಕ್ಕಳು ಚೆನ್ನಾಗಿ ಓದಬೇಕು ಮುಂದಿನ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸ ಪಡೆಯಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಾದ ಹಿರಿಯ ಶಿಕ್ಷಕಿ ಭವ್ಯ, ಯು.ಕೆ.ಜಿ ಶಿಕ್ಷಕಿ ವಸಂತ, ಎಲ್.ಕೆ.ಜಿ ಶಿಕ್ಷಕಿ ರೇವತಿ, ಟ್ರಸ್ಟಿ ಆಫ್ ಸ್ಕೂನೊವೇಟ್ ಮಲ್ಲಿಕಾರ್ಜುನ ಇದ್ದರು.
