ಪುಣೆ
ಮಹಾನ್ ವ್ಯಕ್ತಿಗಳ ಪದವಿಗಳನ್ನು ನೆಲಸಮ ಮಾಡುವ ತಾಕತ್ತು ಇರುವ ಈರುಳ್ಳಿ ದರ ಕುಸಿದಿಂದ ಜನತೆ ಕಂಗಾಲಾಗಿದ್ದಾರೆ. ಪುಣೆಯ ಎಪಿಎಂಸಿಯಲ್ಲಿ ಪ್ರತೀ ಕೆ.ಜಿ ಈರುಳ್ಳಿಯು 50 ಪೈಸೆಯಿಂದ 3 ರು. ವರೆಗೂ ಬಿಕರಿಯಾಗುತ್ತಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಜನರು ಮುಗಿಬಿದ್ದು ಖರೀದಿಸುತ್ತಿರುವ ದೃಷ್ಯ ಸರ್ವೇ ಸಾಮಾನ್ಯವಾಗಿತ್ತು .
2018ನೇ ಸಾಲಿನ ಹಿಂಗಾರಿನ ಈರುಳ್ಳಿಯನ್ನು ರೈತರು ಈಗ ಮಾರಾಟ ಮಾಡುತ್ತಿರುವುದೇ ಬೆಲೆ ಈ ಪರಿಯಾಗಿ ಕುಸಿಯಲು ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ಹಿಂಗಾರು ಸೀಸನ್ನ ಈರುಳ್ಳಿಯನ್ನು ಡಿಸೆಂಬರ್ ಹೊತ್ತಿಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಇನ್ನು 30 ರಿಂದ 40 ಟನ್ಗಳ ಹಿಂಗಾರಿ ಈರುಳ್ಳಿಗಳನ್ನು ರೈತರು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದಾಗಿ ತಾವು ಈರುಳ್ಳಿ ಬೆಳೆಯಲು ಮಾಡಿದ ಖರ್ಚುಗಳನ್ನು ಸರಿದೂಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಈರುಳ್ಳಿ ಬೆಲೆಯು ಪಾತಾಳಕ್ಕೆ ಕುಸಿಯುತ್ತಿದೆ. ಆದರೆ, ರೈತರು ಮಾತ್ರ ಭವಿಷ್ಯದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಬಹುದು ಎಂಬ ಆಶಾಭಾವನೆಯಲ್ಲಿ ತಾವು ಬೆಳೆದ್ದದ್ದನ್ನು ತಮ್ಮಲ್ಲೇ ಶೇಖರಿಸಿಕೊಂಡಿದ್ದರು. ಹೀಗಾಗಿಯೇ ಈರುಳ್ಳಿ ಬೆಲೆ ಈ ಪರಿಯಾಗಿ ಕುಸಿದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/01/Onion-market.gif)