ಮೇಘಾಲಯ : ಅಣಬೆ ತಿಂದು 5 ಸಾವು

ಶಿಲ್ಲಾಂಘ್:

     ಮೇಘಾಲಯದ ಪಶ್ಚಿಮ ಭಾಗದ ಪರ್ವತ ಜಿಲ್ಲೆಯಾದ ಜೈತಿಂಯಾದಲ್ಲಿ ವಿಷಪೂರಿತ ಅಣಬೆ ಸೇವಿಸಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಯಾಗಿದೆ.

       ಸ್ಥಳೀಯವಾಗಿ ಕರೆಯಲ್ಪಡುವ ಟಿಟ್ ಬಿಸೆನ್ ಅಣಬೆ ಸೇವಿಸಿ ಅಸ್ವಸ್ಥಗೊಂಡಿದ್ದ 23 ವರ್ಷದ ಯುವಕ ಖೊಂಗ್ಲಾನನ್ನು ಈಶಾನ್ಯ ಪ್ರಾದೇಶಿಕ ಇಂದಿರಾ ಗಾಂಧಿ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ  ಮಧ್ಯಾಹ್ನ ಯುವಕ ಮೃತಪಟ್ಟಿದ್ದಾನೆ .ಇದರೊಂದಿಗೆ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಭಾರತ-ಬಾಂಗ್ಲಾದೇಶ ಗಡಿಯ ಅಮ್ಲಾರೆಮ್ ಉಪ ವಿಭಾಗದ ಲಮಿನ್ ಗ್ರಾಮದ ಮೂರು ಕುಟುಂಬಗಳ 18 ಮಂದಿ ಕಾಡು ಅಣಬೆ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link