ಠೇವಣಿ ಕಳೆದುಕೊಂಡ ಬಿ ಎಸ್ ಪಿ ಅಭ್ಯರ್ಥಿಗಳು ..!!

ಶಿಮ್ಲಾ :

      ಬಹುಜನ ಸಮಾಜ ಪಕ್ಷದ ಎಲ್ಲ ನಾಲ್ಕು ಅಭ್ಯರ್ಥಿಗಳು ಸೇರಿದಂತೆ ಒಟ್ಟು 37 ಅಭ್ಯರ್ಥಿಗಳು ಹಿಮಾಚಲ ಪ್ರದೇಶ  ಚುನವಾಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ ಎಂದು ರಾಜ್ಯದ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

    ಚುನಾವಣೆಗೆ ಸ್ಪರ್ಧಿಸಲು ಇಡಬೇಕಾದ ಭದ್ರತಾ ಠೇವಣಿ 25,000 ರೂ.ಗಳನ್ನು ಉಳಿಸಿಕೊಳ್ಳಲು ಬೇಕಾಗಿರುವ ಒಟ್ಟು ಮತಗಳ ಶೇ. 16.67 ಅಥವಾ ಆರನೇ ಒಂದರಷ್ಟು ಮತಗಳನ್ನು ಪಡೆಯುವಲ್ಲಿ ರಾಜ್ಯದಲ್ಲಿನ ನಾಲ್ಕು ಲೋಕಸಭಾ ಕ್ಷೇತ್ರಗಳ ಒಟ್ಟು 45 ಅಭ್ಯಥಿಗಳ ಪೈಕಿ 37 ಮಂದಿಯಲ್ಲಿ ಯಾರೊಬ್ಬರು ವಿಫ‌ಲರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

       ದಲೀಪ್‌ ಸಿಂಗ್‌ ಕೈತ್‌ (ಸಿಪಿಎಂ 14,838 ಮತಗಳು) ಮತ್ತು ಶೇಷ ರಾಮ (ಬಿಎಸ್‌ಪಿ 9,060 ಮತಗಳು) ಸೇರಿದಂತೆ ಒಟ್ಟು 15 ಮಂದಿ ಮಂಡಿ ಕ್ಷೇತ್ರದಲ್ಲಿ ಇಡುಗಂಟು ಕಳೆದುಕೊಂಡಿದ್ದಾರೆ. ಇದನ್ನು ಅನುಸರಿಸಿ ಹಮೀರ್‌ಪುರ ಮತ್ತು ಕಾಂಗ್ರಾ ಕ್ಷೇತ್ರಗಳ ಒಂಬತ್ತು ಮಂದಿ ಹಾಗೂ ಶಿಮ್ಲಾದ ನಾಲ್ಕು ಸಂಸದೀಯ ಕ್ಷೇತ್ರಗಳ ನಾಲ್ವರು ಇಡುಗಂಟು ಕಳೆದುಕೊಂಡಿದ್ದಾರೆ.

      ವಿಶೇಷವೆಂದರೆ ಶಿಮ್ಲಾ, ಹಮೀರ್‌ಪುರ ಮತ್ತು ಕಾಂಗ್ರಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಎಸ್‌ಪಿ ಅಭ್ಯರ್ಥಿಗಳು ನೋಟಾ ಓಟುಗಳಿಗಿಂತಲೂ ಕಡಿಮೆ ಮತಗಳನ್ನು ಪಡೆದಿದ್ದಾರೆ.ಹಿಮಾಚಲ ಪ್ರದೇಶದ ಎಲ್ಲ ನಾಲ್ಕು ಸೀಟುಗಳನ್ನು ಬಿಜೆಪಿ ಗೆದ್ದು ಕ್ಲೀನ್‌ ಸ್ವೀಪ್‌ ಸಾಧಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap