ಪ್ರಶಸ್ತಿ ನಿರಾಕರಣೆಗೆ ತಮ್ಮದೇ ಕಾರಣ ನೀಡಿರುವ ಗೀತಾ ಮೆಹ್ತಾ, ಪದ್ಮ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವ ಕೇಂದ್ರ ಸರ್ಕಾರ ಗೌರವ ನೀಡಿದೆ. ಆಡರೆ ನಾನು ನಾನು ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂಬುದನ್ನು ವಿಷಾದದಿಂದ ಹೇಳುತ್ತಿದ್ದೇನೆ ಎಂದು ಗೀತಾ ಮೆಹ್ತಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆ ಸನಿಹವೇ ಇರುವುದರಿಂದ ನಾನು ಪದ್ಮ ಪ್ರಶಸ್ತಿಯನ್ನು ಸ್ವೀಕರಿಸಿದರೆ ಅದಕ್ಕೆ ತಪ್ಪಾದ ಅರ್ಥಗಳು ಬರುತ್ತವೆ”, ಆದ್ದರಿಂದ ನಾನು ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ ಎಂಬುದನ್ನು ವಿಷಾದದಿಂದ ಹೇಳುತ್ತಿದ್ದೇನೆ” ಎಂದು ಗೀತಾ ಮೆಹ್ತಾ ತಿಳಿಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ಸಹ ಪದ್ಮ ಪ್ರಶಸ್ತಿ ಗಳಿಸಿರುವ ತಮ್ಮ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.