ಹೈದರಾಬಾದ್:
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೂತನ ವಿಭಜಿತ ಆಂಧ್ರದ ಮುಖ್ಯಮಂತ್ರಿಯಾದ ಚಂದ್ರಬಾಬು ನಾಯ್ಡು ದೇಶ ಕಂಡ ಅತ್ಯಂತ ಕೊಳಕು ರಾಜಕಾರಣಿಯಾದರೆ, ಕಾಂಗ್ರೆಸಿಗರು ಶತ ಮೂರ್ಖರು ಎಂದು ಕೆ.ಚಂದ್ರಶೇಖರ ರಾವ್ ಕುಟುಕಿದ್ದಾರೆ.
ಪ್ರಗತಿ ಭವನದಲ್ಲಿ ನೆನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಜೀವನದಲ್ಲೇ ಇಂಥ ಕೊಳಕು ರಾಜಕಾರಣಿಯನ್ನು ನಾನು ನೋಡಿಲ್ಲ ಎಂದು ಚಂದ್ರಬಾಬು ನಾಯ್ಡು ಅವರನ್ನು ಸಹಿಸಿಕೊಂಡಿರುವ ಆಂಧ್ರದ ಜನತೆಗೆ ನಾನು ಸಲ್ಯೂಟ್ ಹೊಡೆಯುತ್ತೇನೆ. ನಾಯ್ಡು ಅವಕಾಶವಾದಿ ರಾಜಕಾರಣಿ. ಬೇಕಾದಾಗ ಬಳಸಿಕೊಂಡು ಬೇಡವಾದಾಗ ಎಸೆಯುವ ನಡೆಯಿಂದಲೇ ಅವರು ಖ್ಯಾತಿ ಗಳಿಸಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಕೈಜೋಡಿಸಿ ಅನುಕೂಲ ಮಾಡಿಕೊಳ್ಳವವರೆಗೂ ಮಾಡಿಕೊಂಡು ಇದೀಗ ಕಾಂಗ್ರೆಸ್ನ ರಾಹುಲ್ ಗಾಂಧಿ ಜತೆ ಕೈಜೋಡಿಸಿ ಜನತೆಗೆ ಅನ್ಯಾಯ ಮಾಡಿದ್ದಾರೆ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾಯ್ಡು ಹೀನಾಯ ಸೋಲು ಅನುಭವಿಸುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/12/Show-KCR-Stole-Rahul-Gandhi.gif)