ಹೈದರಾಬಾದ್:

ನಮ್ಮ ನೆರೆ ರಾಜ್ಯ ತೆಲಂಗಾಣದಲ್ಲಿ ಚುನಾವಣೆಯ ಕಾವು ಜೋರಾಗಿದ್ದು ತೆಲಂಗಾಣ ರಾಜ್ಯ ಹಂಗಾಮಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಭಹಿರಂಗ ಸಮಾವೇಶ ನಡೆಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿಯವರನ್ನು ಇಂದು ಮುಂಜಾನೆ ಬಂಧಿಸಲಾಗಿದೆ.
ಇಂದು ಮುಂಜಾನೆ ಸುಮಾರು 3 ಗಂಟೆಗೆ ಕೆಲವರು ನಮ್ಮ ಮನೆಯ ಬಾಗಿಲು ತಟ್ಟಿ ಬಳಿಕ ಬಾಗಿಲು ತೆಗೆದ ತಕ್ಷಣ ಒಳ ಬಂದು ತಮ್ಮ ಪತಿಯನ್ನು ಎಳೆದು ಕೊಂಡು ಹೋಗಿದ್ದಾರೆ ಎಂದು ರೇವಂತ್ ರೆಡ್ಡಿ ಪತ್ನಿ ಗೀತಾ ಅವರು ಆರೋಪಿಸಿದ್ದಾರೆ . ಕಾರಣ ಕೇಳಿದರೆ ಮುಖ್ಯಮಂತ್ರಿಗಳ ಸಭೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ಬಂಧನ ಎಂದು ಪೊಲೀಸರು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
