ಪ್ರಧಾನಿಗೆ ಸವಾಲೆಸೆದ ದಿಗ್ವಿಜಯ್ ಸಿಂಗ್ …!!!!

ನವದೆಹಲಿ:
         ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ನೀಡಿದ  ಒಂದು ಹೇಳಿಕೆಯ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದದಿರುವ ಸಮಯದಲ್ಲಿ ದಿಗ್ವಿಜಯ್ ಅವರು ಬಿಜೆಪಿ ನಾಯಕರಿಗೆ ಪ್ರತಿ ಸವಾಲು ಎಸೆದ್ದಿದ್ದಾರೆ.
          ತಾವು ಪಾಕಿಸ್ತಾನ ಬೆಂಬಲಿಗ ಎಂಬ ಬಿಜೆಪಿ ನಾಯಕರ ಆರೋಪ ಸಾಬೀತುಪಡಿಸಿ ಮತ್ತು ತಮ್ಮ ಮೇಲೆ ಕೇಸು ಹಾಕಿ ಎಂದು ಪ್ರಧಾನಿ ಮೋದಿ ಅವರಿಗೆ ದಿಗ್ವಿಜಯ್ ಸವಾಲು ಹಾಕಿದ್ದಾರೆ.
       ಪುಲ್ವಾಮಾ ಭಯೋತ್ಪಾದಕ ದಾಳಿ ಒಂದು ಆಕಸ್ಮಿಕ ಎಂದು ಉಲ್ಲೇಖಿಸಿದ್ದಕ್ಕೆ ಟೀಕಿಸಿದ ಪ್ರಧಾನಿ ಮೋದಿ ಮತ್ತು ಕೇಂದ್ರದ ಮೂವರು ಸಚಿವರುಗಳು ತಮ್ಮನ್ನು ದೇಶ ವಿರೋಧಿ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್, ನನ್ನನ್ನು ಪಾಕಿಸ್ತಾನ ಬೆಂಬಲಿಗ ಮತ್ತು ದೇಶ ವಿರೋಧಿ ಎಂದು ಹೇಳಿರುವ ದೆಹಲಿಯ ಪೊಲೀಸರು ಕೇಂದ್ರ ಸರ್ಕಾರದ ಅಡಿ ಹಿಡಿತದಲ್ಲಿದ್ದಾರೆ. ನಿಮಗೆ ಅಷ್ಟು ಧೈರ್ಯವಿದ್ದರೆ ನನ್ನ ಮೇಲೆ ಕೇಸು ಹಾಕಿ ಎಂದರು.
      ಮೋದಿ ಮತ್ತು ಅವರ ಸಂಪುಟದ ಸಚಿವರು ತಮ್ಮ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ. ತಮ್ಮ ವಿರುದ್ಧ ದೇಶದ್ರೋಹಿ ಕೇಸನ್ನು ಕೂಡ ದಾಖಲಿಸಲು ನೋಡಿದ್ದಾರೆ ಎಂದು ಹೇಳಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap