ಕ್ಷಿಪ್ರ ಆರ್ಥಿಕ ಪ್ರಗತಿ ಕಷ್ಟ ಸಾಧ್ಯ : ನಿರ್ಮಲಾ ಸೀತಾರಾಮನ್

ನವದೆಹಲಿ

     ಜಾಗತಿಕವಾಗಿ ಸಾಂಸ್ಕೃತಿಕವಾಗಿ ಮತ್ತು ನೈತಿಕವಾಗಿ ಕ್ಷಿಪ್ರ ಗತಿಯಲ್ಲಿ ನಮ್ಮ ದೇಶ ಬೆಳವಣಿಗೆಯಾಗುತ್ತಿದ್ದರು ಆರ್ಥಿಕವಾಗಿ ನಮ್ಮ ಪ್ರಗತಿ ಇನ್ನು ಭೂಮಿಯ ಕಡೆಗೆ ಮುಖಮಾಡಿದೆ,ಅದನ್ನು ಮೇಲೆತ್ತಲು ಕ್ಷಿಪ್ರ ಗತಿಯ ಬೆಳವಣಿಗೆ ಅಸಾಧ್ಯ ಎಂದು ನಿರ್ಮಲಾಸೀತಾರಾಮನ್ ತಿಳಿಸಿದ್ದಾರೆ.

      ಶುಕ್ರವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್,ಕ್ಷಿಪ್ರ ಆರ್ಥಿಕ ಪ್ರಗತಿ ಕಷ್ಟ ಸಾಧ್ಯವಾಗಿದ್ದು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ 20 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕಾರ್ಪೋರೇಟ್ ತೆರಿಗೆಗಳನ್ನು ಕಡಿತಗೊಳಿಸಲಾಗಿದೆ. ಈ ತೆರಿಗೆ ಕಡಿತದ ನಂತರ ಕಂಪನಿಗಳು ಹೊಸ ಹೂಡಿಕೆಯನ್ನು ಯೋಚಿಸುತ್ತಿವೆ. ಆದರೆ ಹೂಡಿಕೆಗಳು ಕಾರ್ಯರೂಪಕ್ಕೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

     ಪ್ರಧಾನಿ ಮೋದಿಯವರು ಸರ್ಕಾರವು 2013ರಿಂದಲೂ ಮಂದಗತಿಯಲ್ಲಿರುವ ಆರ್ಥಿಕತೆಯನ್ನು ಚೇತರಿಸಲು ನಾನಾ ಕ್ರಮಗಳನ್ನು ಕೈಗೊಂಡಿದ್ದು. ನಿಧಾನಗತಿಯ ಆರ್ಥಿಕತೆ ಮತ್ತು ಆದಾಯದ ನಡುವೆ ಕಳೆದ ವಾರವಷ್ಟೇ ಮೂಡಿಸ್ ಸಂಸ್ಥೆ ಆರ್ಥಿಕ ಸೂಚಂಕವನ್ನು ಸ್ಥಿರದಿಂದ ನಕಾರಾತ್ಮಕ ಎಂದು ಬದಲಾಯಿಸಿರುವುದರಿಂದ ಆರ್ಥಿಕ ಶಿಸ್ತಿಗಾಗಿ ಕಾರ್ಪೋರೇಟ್ ತೆರಿಗೆ ಕಡಿತದಂತಹ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap