370ನೇ ಕಲಂ ರದ್ದತಿ: ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ..!!

ನವದೆಹಲಿ

   ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ತುರ್ತು ವಿಚಾರಣೆ ನಡೆಸಲು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

   ನ್ಯಾ.ಎನ್ ವಿ ರಮಣ ನೇತೃತ್ವದ ವಿಭಾಗೀಯ ಪೀಠ, “ಈ ವಿಷಯವನ್ನು ಸೂಕ್ತವಾದ ನ್ಯಾಯಪೀಠದ ಮುಂದೆ ಇಡಲಾಗುವುದು, ಅಂದರೆ ಸಿಜೆಐ, ಈ ವಿಷಯವನ್ನು ಪಟ್ಟಿ ಮಾಡಿ ನಂತರದಲ್ಲಿ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು “.

    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ಅಧ್ಯಕ್ಷೀಯ ಆದೇಶವನ್ನು ಪ್ರಶ್ನಿಸಿ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತು. ಈ ಅರ್ಜಿಯನ್ನು ವಕೀಲ ಎಂ ಎಲ್ ಶರ್ಮಾ ಅವರು ರಾಜ್ಯ ವಿಧಾನಸಭೆಯಿಂದ ಒಪ್ಪಿಗೆ ಪಡೆಯದೆ ಅಂಗೀಕರಿಸಿದ್ದರಿಂದ ರಾಷ್ಟ್ರಪತಿ ಆದೇಶವು “ಕಾನೂನುಬಾಹಿರ” ಎಂದು ಪ್ರತಿಪಾದಿಸಿದರು.

   ಕೇಂದ್ರವು ಕಾಶ್ಮೀರಕ್ಕೆ ನಿಡಿದ್ದ ವಿಶೇಷ ಸ್ಥಾನ ಮಾನದ ವಿಧಿಯಾದ 370 ಹಿಂತೆಗೆದುಕೊಂಡಿದ್ದು, ಇದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮತ್ತು ಪ್ರತ್ಯೇಕವಾದ ರಾಜ್ಯ ಎಂದು ಜವಾಹರ್ ಲಾಲ್ ನೆಹರು ಕಾಲದಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಕಾನೂನು ಬಾಹಿರವಾಗಿ ರದ್ದು ಮಾಡಿ ಈ ಸರ್ಕಾರ ದೇಶದ ಜನತೆಗೆ ಯಾವ ಸಂದೇಶ ನೀಡಲು ಹೊರಟಿದೆ ಎಂದು ವಕೀಲರು ನ್ಯಾಯಸ್ಥಾನದಲ್ಲಿ ತಮ್ಮ ವಾದವನ್ನು ಮಂಡಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap